Posts

Showing posts from July, 2018

ಜೈ ಶೇಗುಣಸಿ ದಿನದ ಸುದ್ದಿ... ದಿ: 31-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 31-07-18 ** ಜೆಡಿಎಸ್ ಬಲಪಡಿಸಲು ಕರ್ನಾಟಕ ಒಡೆಯಲು ಹುನ್ನಾರ! ಏಕೀಕೃತ ಕರ್ನಾಟಕ ಒಡೆಯಲು ಅಪ್ಪ-ಮಗ ಷಡ್ಯಂತ್ರ! ದೇವೇಗೌಡ್ರು, ಸಿಎಂ ವಿರುದ್ಧ  ಕೆಂಡಾಮಂಡಲ ** ಸಮ್ಮಿಶ್ರ ಸರ್ಕಾರದ ಮಲತಾಯಿ ಧೋರಣೆಯೇ ಪ್ರತ್ಯೇಕ ರಾಜ್ಯದ ಕೂಗಿಗೆ ಕಾರಣ: ದಿಂಗಾಲೇಶ್ವರ ಶ್ರೀ ** ಜಾತಿ ವಿಷಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ: ಸಿಎಂ ವಿರುದ್ಧ ಬಿಎಸ್​ವೈ ಗರಂ ** ರಾಜ್ಯದಲ್ಲಿ ಮತ್ತೆ ಬಿಎಸ್​ವೈ ಅಧಿಕಾರಕ್ಕೆ ಬರುವುದು ನಿಶ್ಟಿತ: ಜನಾರ್ದನ ರೆಡ್ಡಿ ** ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಯಾವುದೇ ಕಾರಣಕ್ಕೂ ಪರಿಹಾರ ನೀಡುವಲ್ಲಿ ವಿಳಂಬವಾಗಬಾರದು: ಜಿಲ್ಲಾಧಿಕಾರಿಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಖಡಕ್‌ ಸೂಚನೆ ** ಉ.ಕ ಇಬ್ಭಾಗ ಸಮಸ್ಯೆಗೆ ಮಾಧ್ಯಮವೇ ಕಾರಣ: ಸಿಎಂ ** 49,000 ಕೋಟಿ ಸಾಲ ಮನ್ನಾ ಯೋಜನೆ: ಪಾರದರ್ಶಕ ಜಾರಿಗೆ ಸಿಎಂ ಆದೇಶ ** ಉ.ಕ ಪ್ರತ್ಯೇಕತೆಯ ಪರ ನಿಂತ ಉಮೇಶ್ ಕತ್ತಿ, ಪಿ.ರಾಜೀವ.

ಜೈ ಶೇಗುಣಸಿ ದಿನದ ಸುದ್ದಿ... ದಿ: 30-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 30-07-18 ** ಪ್ರತ್ಯೇಕ ರಾಜ್ಯದ ಕೂಗಿಗೆ ಮೂಲ‌ ಕಾರಣ ಸಮ್ಮಿಶ್ರ ಸರ್ಕಾರ: ಕೋಟಾ ಶ್ರೀನಿವಾಸ ಪೂಜಾರಿ ** ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ: ಈಶ್ವರ ಖಂಡ್ರೆ ** ಯಡಿಯೂರಪ್ಪ ವಿರುದ್ಧ ರಾಜಕೀಯ ಷಡ್ಯಂತ್ರ: ಶೋಭಾ ಕರಂದ್ಲಾಜೆ ಆರೋಪ ** ಪ್ರತ್ಯೇಕ ರಾಜ್ಯ ಬೇಡವೆಂದು ರಾಗಿಮುದ್ದೆ, ಜೋಳದ ರೊಟ್ಟಿ ತಿಂದು ವಾಟಾಳ್ ಪ್ರತಿಭಟನೆ​ ** ಕರುಣಾನಿಧಿ ಆರೋಗ್ಯ ಸ್ಥಿರವಾಗಿದೆ: ವೆಂಕಯ್ಯ ನಾಯ್ಡು ** ದೇವಸ್ಥಾನ ನಿರ್ಮಾಣಕ್ಕೆ ಪ್ರಧಾನಿ ನಿಧಿಯಿಂದ ಹಣ ಕೊಡಿಸಲಾಗದು: ಮೋದಿ ಸಹೋದರ ** ಜೀವನವನ್ನು ಸಂತಸದಿಂದ ಅನುಭವಿಸಿ, ನಿಮ್ಮೊಳಗಿನ ನೆಮ್ಮದಿಯನ್ನು ಹುಡುಕಿಕೊಳ್ಳಿ: ಪ್ರಧಾನಿ ಮೋದಿ ** ಪಾಕ್​ನ್ನು ಏಷ್ಯಾ ಹುಲಿಯನ್ನಾಗಿ ಮಾಡುವ ಸಾಮರ್ಥ್ಯ ಇಮ್ರಾನ್​​ಗಿದೆ: ಶೋಯೆಬ್ ಅಖ್ತರ್

ಜೈ ಶೇಗುಣಸಿ ದಿನದ ಸುದ್ದಿ... ದಿ: 29-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 29-07-18 ** ಶೇಗುಣಸಿಯ ಶ್ರೀ ಮುರುಘೇoದ್ರ ಮಠದ ಯಾತ್ರಿ ನಿವಾಸ ಉದ್ಘಾಟಿಸಿದ ವಿರಕ್ತ ಮಠದ ಶಂಕರ ಶ್ರೀ ಸಂಸದ ಹುಕ್ಕೇರಿ **ನನ್ನ ಕ್ಷೇತ್ರ ಬದಲಾವಣೆ ಕುರಿತು ಗಾಳಿ ಸುದ್ದಿ ಹರಡುತ್ತಿರುವವರು ದೇಶದ್ರೋಹಿಗಳು: ಡಿವಿಎಸ್. ** ಎಚ್ಡಿಕೆ ವಿರುದ್ಧದ ಬಿಜೆಪಿಯ ಪಾದಯಾತ್ರೆ ಸ್ಥಳೀಯ ಸಮಸ್ಯೆಗಷ್ಟೇ ಸೀಮಿತ: ಅಶೋಕ್​ ** ಸಿಎಂ ತೇಜೋವಧೆ ಪ್ರಕರಣ: ಬಿಎಸ್​ವೈ ವಿರುದ್ಧ ಎಫ್‌ಐಆರ್‌ಗೆ ಕೋರ್ಟ್‌ ಸಮ್ಮತಿ ** ಕಾಂಗ್ರೆಸ್​ ಮನಸ್ಸುಗಳೇ ಮೈತ್ರಿಯನ್ನು ಒಪ್ಪಿಲ್ಲ; ರಾಮನಗರ ಬಿಟ್ಟುಕೊಟ್ಟರೆ ನಾವು ಸುಮ್ಮನಿರಲ್ಲ: ಸಿ.ಎಂ.ಲಿಂಗಪ್ಪ. ** ಬೆಟ್ಟದಿಂದ ಪ್ರಪಾತಕ್ಕೆ ಉರುಳಿದ ಬಸ್‌,ಕೊಂಕಣ ಕೃಷಿ ವಿದ್ಯಾಪೀಠ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಸೇರಿ 30 ಜನ ಸಾವು. ** ಪಾಕ್​ ರಾಷ್ಟ್ರೀಯ ಅಸೆಂಬ್ಲಿಗೆ ಆಯ್ಕೆಯಾದ ಮೊದಲ ಪಾಕಿಸ್ತಾನಿ ಹಿಂದೂ ಮಹೇಶ್​ ಕುಮಾರ್

ಜೈ ಶೇಗುಣಸಿ ದಿನದ ಸುದ್ದಿ... ದಿ: 28-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 28-07-18 ** ನಿವೃತ್ತಿಯ ನಂತರವೂ ಸೇವೆಯಲ್ಲಿದ್ದ ಪ್ರಾಚಾರ್ಯರು, ಉಪನ್ಯಾಸಕರ ಬಿಡುಗಡೆಗೆ ಆದೇಶ ** ಸಿಎಂ ಪದೇಪದೆ ಉತ್ತರಕರ್ನಾಟಕವನ್ನು ಕೆಣಕುತ್ತಿದ್ದಾರೆ: ಶ್ರೀರಾಮುಲು ** ಪ್ರತ್ಯೇಕರಾಜ್ಯ ದ ಕೂಗಿಗೆ ಉತ್ತರಕರ್ನಾಟಕ ಭಾಗದ ಸ್ವಾಮೀಜಿಗಳ ಬೆಂಬಲ ** ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ, ಆಗಲು ಬಿಡಲ್ಲ: ಎಂಬಿ ಪಾಟೀಲ್ ** ಸೂಪರ್ ಸಿಎಂ ಪವರ್: ರಾತ್ರೋ ರಾತ್ರಿ 206 ಎಂಜಿನಿಯರ್ ಗಳ ಎತ್ತಂಗಡಿ! ** ಕಾಶ್ಮೀರ ಸಮಸ್ಯೆ ಬಗೆಹರಿಸುವ ಇಮ್ರಾನ್​ ಮಾತು ಹಗಲುಗನಸು: ಬಿಜೆಪಿ ನಾಯಕ ಸುಬ್ರಹ್ಮಣ್ಯಂ ಸ್ವಾಮಿ ** ಕರುಣಾನಿಧಿಜಿ ಬೇಗ ಚೇತರಿಸಿಕೊಳ್ಳಲಿ: ಪಿಎಂ ಮೋದಿ

ಆಧ್ಯಾತ್ಮದ ಮೂಲಕ ಶೇಗುಣಸಿ ಗ್ರಾಮದ ಕೀರ್ತಿ ಬೆಳಗಿಸಿದ ಗುರುವರ್ಯರಿಗೆ "ಗುರು ಪೂರ್ಣಿಮೆಯ" ಶುಭಾಶಯಗಳು.

Image
ತಮ್ಮ ಆಶೀರ್ವಾದ ಸದಾವಿರಲಿ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 27-07-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 27-07-18 ** ನಿರುದ್ಯೋಗ ನಿವಾರಣೆಗೆ ಶಿಕ್ಷಣ, ಕೌಶಲ್ಯವೃದ್ಧಿಗೆ ಒತ್ತು ಅಗತ್ಯ: ಪ್ರಧಾನಿ ಮೋದಿ ** ಐಟಿ ರಿಟರ್ನ್ಸ್ ಸಲ್ಲಿಕೆ ಅವಧಿ ವಿಸ್ತರಣೆ; ಕೊನೆ ದಿನ ಆಗಸ್ಟ್​ 31 ** ಭಾರತೀಯ ಸೇನೆ ಯಾವುದೇ ತುರ್ತು ಸನ್ನಿವೇಶಗಳನ್ನು ಎದುರಿಸಲು ಸದಾ ಸಿದ್ಧವಾಗಿದೆ: ಸೇನಾ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ರಣಬೀರ್​ ಸಿಂಗ್​ ** ಗೃಹಮಂತ್ರಿಯಾದರೆ ಬುದ್ಧಿಜೀವಿಗಳಿಗೆ ಗುಂಡು ಹಾರಿಸಲು ತಿಳಿಸುತ್ತೇನೆ: ಬಸನಗೌಡ ಪಾಟೀಲ್‌ ಯತ್ನಾಳ್‌ ** ಹಿಂದೂಗಳು ಕನಿಷ್ಠ 5 ಮಕ್ಕಳಿಗೆ ಜನ್ಮ ನೀಡಬೇಕು: ಬಿಜೆಪಿ ಶಾಸಕ ** ಶಾಂತಿ ಪ್ರಕ್ರಿಯೆಯಲ್ಲಿ ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ: ಇಮ್ರಾನ್ ಖಾನ್ ** ಪಾಕಿಸ್ತಾನವನ್ನು 4 ಹೋಳು ಮಾಡಲು ಭಾರತ ಸಿದ್ಧವಾಗಿರಬೇಕು: ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ** ವರ್ಷದ ಅಂತಾರಾಷ್ಟ್ರೀಯ ಆಟಗಾರನೆಂಬ ಕೀರ್ತಿಗೆ ಭಾಜನರಾದ ವಿರಾಟ್

ಬೆನ್ನಿಗೆ ಚೂರಿ ಇರಿದ ಪಾಪಿ ಪಾಕ್ ಗೆ ಪಾಠ ಕಲಿಸಿದ ದಿನ ಇಂದು! ಈ ಸಂದರ್ಭದಲ್ಲಿ ಅಟಲ್ ರನ್ನ ನೆನೆಯದೆ ಇರಲು ಸಾಧ್ಯವೇ?

Image
ಜೈ ಶೇಗುಣಸಿ ಸುದ್ದಿ... ದೇಶ ಇಂದು ಸಂಭ್ರಮದಿಂದ ‘ಕಾರ್ಗಿಲ್ ವಿಜಯ ದಿವಸ’ ಆಚರಿಸುತ್ತಿದೆ.. ನಮ್ಮ ಹೆಮ್ಮೆಯ ಯೋಧರಿಗೆ ದೇಶವೇ ಗೌರವ ಸೂಚಿಸುತ್ತಿದೆ.. ಆದರೆ ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿಯವರನ್ನ ಈ ಸಂದರ್ಭದಲ್ಲಿ ನೆನೆಸಿಕೊಳ್ಳದಿದ್ದರೆ ಸಂಭ್ರಮಾಚರಣೆಗೆ ಅರ್ಥವಿರುವುದಿಲ್ಲ… ಹೌದು. ನಮ್ಮ ಯೋಧರ ಕಿಚ್ಚಿನ ಹೋರಾಟದ ಹಿಂದೆ ಒಂದು ಸ್ಫೂರ್ತಿಯಿತ್ತು. ಬಂದೂಕಿನಲ್ಲಿ ಗುಂಡಿಲ್ಲದಿದ್ದರೂ ಸೈನಿಕರ ಧೃತಿಗೆಡದಿರದಂತೆ ಸರ್ಕಾರ ಬೆನ್ನಿಗೆ ನಿಂತಿತ್ತು. ಆಗ ತಾನೆ ಅಧಿಕಾರಕ್ಕೆ ಬಂದಿದ್ದ ಅಟಲ್ ಸರ್ಕಾರ ಪಾಕಿಸ್ತಾನದ ಜೊತೆ ಎಲ್ಲಾ ಸರ್ಕಾರಗಳಂತೆ ಸ್ನೇಹ ಹಸ್ತ ಚಾಚಿದ್ದರು. ಒಂದು ಹೆಜ್ಜೆ ಮುಂದೆಯೂ ಹೋಗಿ ಲಾಹೋರ್ ಗೆ ಬಸ್ ಯಾತ್ರೆಯನ್ನು ಕೈಗೊಂಡರು. ಎರಡೂ ದೇಶಗಳ ಸ್ನೇಹದ ಹೊಸ ಮನ್ವಂತರ ಎಂದೇ ಇದನ್ನ ಭಾವಿಸಲಾಗಿತ್ತು. ಇತಿಹಾಸದಲ್ಲಿ ಎಂದಿಗೂ ಯಾರಿಗೂ ಕೇಡು ಬಯಸದ ದೇಶ ಭಾರತ ತನ್ನ ಮಾತಿನಂತೆಯೇ ನಡೆದುಕೊಂಡಿತ್ತು. ಆದರೆ ಸದಾ ಭಾರತದ ಕೆಡುಕನ್ನೇ ಬಯಸುವ ಕಪಟಿ ಪಾಕಿಸ್ತಾನ ಒಂದು ಕಡೆಯಿಂದ ವಾಜಪೇಯಿ ತೋರಿದ ಸ್ನೇಹ ಹಸ್ತಕ್ಕೆ ಕೈಚಾಚಿ ಇನ್ನೊಂದು ಕಡೆಯಿಂದ ಭಾರತದ ಬೆನ್ನಿಗೇ ಇರಿಯಿತು. ಅತ್ತ ಲಾಹೋರಿನಲ್ಲಿ ನವಾಜ್ ಶರೀಫ್ ಪ್ರಧಾನಿ ವಾಜಪೇಯಿ ಅವರ ಕೈಕುಲುಕುತ್ತಿರುವಾಗ ಇತ್ತ ಗಡಿಭಾಗದಲ್ಲಿ ತನ್ನ ಸೇನೆಯನ್ನು ಜಮಾಗೊಳಿಸಿ, ಭಾರತದ ಮೇಲೆ ದಾಳಿ ಮಾಡಲು ಹೊಂಚು ಹಾಕಿ ಕುಳಿತಿತ್ತು. ಸ್ನೇಹ ಹಸ್ತ ಚಾಚುತ್ತಾ ಭಾರತ ಎಲ್ಲೋ ಒಂದು ಬದಿ...

ವಿಜಯಭದ್ರ ಮುನಿ ಮಹಾರಾಜರ ಅಂತ್ಯಕ್ರಿಯೆ..

Image
ಜೈ ಶೇಗುಣಸಿ ಸುದ್ದಿ...  ಖವಟಕೊಪ್ಪ ಗ್ರಾಮದಲ್ಲಿ 108 ವಿಜಯಭದ್ರ ಮುನಿಮಹಾರಾಜರ ಅಂತ್ಯಕ್ರಿಯೆ ಬುಧವಾರ ಸಕಲ ವಿಧಿ ವಿಧಾನದೊಂದಿಗೆ ನಡೆಯಿತು.  ಆಚಾರ್ಯ 108 ಜಿನಸೇನ ಮುನಿ ಮಹಾರಾಜರು, ಆಚಾರ್ಯ 108 ದೇವಸೇನ ಮುನಿ ಮಹಾರಾಜರು, 108 ಸುಪ್ರಚಾರ್ಯಸೇನ ಮುನಿ ಮಹಾರಾಜರು, ಆಚಾರ್ಯ 108 ಪ್ರಸಂಗ ಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಪ್ರತಿಷ್ಠಾಚಾರ್ಯ ಮಾಣಿಕ ಉಪಾಧ್ಯೆ, ನೇಮಿನಾಥ ಉಪಾಧ್ಯೆ ಸೇರಿ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಂದ ಆಗಮಿಸಿದ 12 ಪಂಡಿತರು ಅಂತ್ಯಕ್ರಿಯೆ ಪೂಜೆ ವಿಧಿ ವಿಧಾನ ನೆರವೇರಿಸಿದರು. ಶ್ರೀಗಂಧ ಕಟ್ಟಿಗೆ, ಕೊಬ್ಬರಿ, ಹಾಲು, ತುಪ್ಪ, ಕರ್ಪೂರ, ಚಂದನ ಮೊದಲಾದ ಪದಾರ್ಥಗಳಿಂದ ಮಹಾಮುನಿಗಳ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕವಲಗುಡ್ಡದ ಅಮರೇಶ್ವರ ಮಹಾರಾಜರು ಮಾತನಾಡಿದರು. ಹುಲಗಬಾಳಿಯ ಶಾಂತಿನಾಥ ಶೆಟ್ಟಿ, ತುಪ್ಪದ ಅಭಿಷೇಕ ಮಾಡಿದರು. ಕುಂತುನಾಥ ಉಗಾರೆ ಕಬ್ಬಿನ ಹಾಲು, ಅನಿಲ ನಂದಗಾಂವ ಗಂಧದ ಅಭಿಷೇಕ, ಅಭಯ ನಂದಗಾಂವ ಹಾಲಿನ ಅಭಿಷೇಕ ಸೇರಿ ನಾಲ್ಕು ದಿಕ್ಕಿನ ಕಳಸಾಭಿಷೇಕ ಹಾಗೂ ಜಲಾಭಿಷೇಕ ನೆರವೇರಿದವು. ಬಳಿಕ ಕೊಕಟನೂರಿನ ವೀರಗೌಡ ಮನೆತನದವರು ಮಹಾಮುನಿಗಳ ದಹನ ಕ್ರಿಯೆ ಮಾಡಿದರು. ಜಿನೈಕ್ಯರಾದ 108 ವಿಜಯಭದ್ರ ಮುನಿಮಹಾರಾಜರು ಅಥಣಿ ತಾಲೂಕಿನ ಕೊಕಟನೂರ ಗ್ರಾಮದ ವೀರಗೌಡ ಮನೆತದಲ್ಲಿ 1947ರ ಅಕ್ಟೋಬರ್ 2ರಂದು ಜನಿಸಿದ್ದರು. 1974 ರಲ್ಲಿ ಧರ್ಮ ಸಂಸ್ಕಾರ ಸ್ವೀಕರಿಸಿದ್ದರು. 105 ದಿವ್ಯಸೇನ ಮುನಿಮಹ...

ಅಬ್ದುಲ್ ಕಲಾಂ ಅವರ ಆಸ್ತಿಯಲ್ಲಿ ಏನೇನಿದೆ ಎಂದು ನೀವು ಕೇಳಿದರೆ ನಿಜಕ್ಕೂ ಶಾಕ್ ಆಗುತ್ತೀರಾ..!! ಮಾಹಿತಿ ಇಲ್ಲಿದೆ ತಪ್ಪದೇ ಓದಿ ತಿಳಿದುಕೊಳ್ಳಿ ಮತ್ತು ಶೇರ್ ಮಾಡಿ..

Image
ಜೈ ಶೇಗುಣಸಿ ಸುದ್ದಿ... ಅಬ್ದುಲ್ ಕಲಾಂ ಅವರು ಮರೆಯಾದರೂ ಅವರ ಹೆಸರು ಎಲ್ಲರ ಮನದಲ್ಲೂ ಶಾಶ್ವತವಾಗಿ ಉಳಿದಿದೆ.ಇವರು ಇಲ್ಲದಿದ್ದರೂ ಇವರ ಸಾಧನೆಗಳು ಇನ್ನೂ ಜೀವಂತವಾಗಿವೆ.ಆದರೆ ಇವರ ಆಸ್ತಿ ಸಾಮಾಜಿಕ ಜಾಲತಾಣದಲ್ಲಿ ಬಹಳ ವೈರಲ್ ಆಗುತ್ತಿದೆ. ಇವರ ಆಸ್ತಿಯಲ್ಲಿ ಅಂತಹದ್ದು ಏನಿದೆ ಎಂದು ಇಲ್ಲಿ ನೋಡೋಣ. ಅಬ್ದುಲ್ ಕಲಾಂ ಅವರ ಬಳಿ ಒಬ್ಬ ಮನುಷ್ಯನಿಗೆ ಬದುಕಲು ಏನು ಬೇಕೋ ಅವೆಲ್ಲವೂ ಕೂಡ ಇವೇ.ಹೌದು ಇವರು ಮರಣ ಹೊಂದಿದ ನಂತರ ಇವರಿಗೆ ತಿಳಿದುಬಂದ ಇವರ ಆಸ್ತಿ ಇದು. 6 ಪ್ಯಾಂಟ್ ಗಳು ಇದರಲ್ಲಿ ಎರಡು ಡಿ.ಆರ್.ಡಿ.ಒ ನದ್ದು 4 ಶಾರ್ಟ್ ಗಳು ಇದರಲ್ಲಿ ಎರಡು ಡಿ.ಆರ್.ಡಿ.ಒ ನದ್ದು 3 ಸೂಟ್ ಗಳು ಇದರಲ್ಲಿ ಒಂದು ಸೂಟ್ ಪಾಶ್ಚಿಮಾತ್ಯ ಮತ್ತು ಇನ್ನೆರಡು ಸೂಟ್ ಗಳು ದೇಶಿಯ ಸೂಟ್ ಗಳು. ಉಡುಗೊರೆಯಾಗಿ ದೊರೆತ ಒಂದು ಪ್ಲಾಟ್. ಇದರ ಜೊತೆಗೆ,1 ಪದ್ಮಶ್ರೀ ಪ್ರಶಸ್ತಿ,1 ಪದ್ಮಭೂಷಣ ಪ್ರಶಸ್ತಿ, 1 ಭಾರತ ರತ್ನ ಪ್ರಶಸ್ತಿ,16 ಡಾಕ್ಟರೇಟ್ ಗಳು. ಇವುಗಳ ಜೊತೆಗೆ ಮುಖ್ಯವಾದ ಆಸ್ತಿಯೆಂದರೆ 2000 ಪುಸ್ತಕಗಳು.ಇವುಗಳು ಸಾಕಲ್ಲವೇ ಜೀವನ ಮಾಡುವುದಕ್ಕೆ..!!

ಜೈ ಶೇಗುಣಸಿ ದಿನದ ಸುದ್ದಿ... ದಿ: 26-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 26-07-18 ** ರೈತರ ನೈತಿಕತೆ ಪ್ರಶ್ನಿಸಿದರೆ ಹುಷಾರ್: ಮಾಲಿಪಾಟೀಲ್ ** ಉಕ ಭಾಗವನ್ನು ನಿರ್ಲಕ್ಷಿಸಿಲ್ಲ: ಸಚಿವ ಶ್ರೀನಿವಾಸ ** ಉತ್ತರ ಕರ್ನಾಟಕ ಕಡೆಗಣನೆ: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಆಗಸ್ಟ್ 2 ರಂದು ಬಂದ್​ ** ನವೆಂಬರ್ ನಲ್ಲಿ ಟೆಕ್ ಶೃಂಗಸಭೆ ಆಯೋಜಿಸಲಿರುವ ರಾಜ್ಯ ಸರ್ಕಾರ ** ಪಾಟೀದಾರ್‌ ಮೀಸಲು ಹೋರಾಟ: ಹಾರ್ದಿಕ್‌ ಪಟೇಲ್‌ಗೆ 2 ವರ್ಷ ಜೈಲು ** ಮರಾಠ ಮೀಸಲು ಹೋರಾಟ: ಆತ್ಮಹತ್ಯೆಗೆ ಯತ್ನಿಸಿದ್ದ ಪ್ರತಿಭಟನಾಕಾರ ಸಾವು ** ಅಪರಾಧಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಲ್ಲಿ ವ್ಯವಸ್ಥೆಯೂ ಅಸಹಾಯಕವಾಗಿದೆ: ರಾಜ್ಯಸಭೆ ಸಭಾಪತಿ ವೆಂಕಯ್ಯನಾಯ್ಡು ಅಸಮಾಧಾನ ** ರಾಜ್ಯಸಭೆಯಲ್ಲಿ ದೇಶಭ್ರಷ್ಟ ಆರ್ಥಿಕ ಅಪರಾಧ ನಿಯಂತ್ರಣ ವಿಧೇಯಕ ಅಂಗೀಕಾರ ** ದೇಶ ಒಡೆಯಲು ಕೆಲ ಶಕ್ತಿಗಳು ಯತ್ನ ನಡೆಸುತ್ತಿವೆ: ರಾಜ್ಯವರ್ಧನ್ ರಾಥೋಡ್

ನಿಮ್ಮ ರೈಲು ಈಗ ಎಲ್ಲಿದೆ? ವಾಟ್ಸಪ್‍ಗೆ ಬರುತ್ತೆ ಮೆಸೇಜ್: ಮಾಹಿತಿ ಪಡೆಯೋದು ಹೇಗೆ?

Image
ಜೈ ಶೇಗುಣಸಿ ಸುದ್ದಿ.. .  ಪ್ರಯಾಣಿಕರಿಗೆ ತ್ವರಿತಗತಿಯಲ್ಲಿ ಮಾಹಿತಿಯನ್ನು ನೀಡುವ ಉದ್ದೇಶದಿಂದ ಭಾರತೀಯ ರೈಲ್ವೇ ಇಲಾಖೆಯು ವಾಟ್ಸಪ್ ಮೂಲಕ ನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ. ಹೌದು, ಭಾರತೀಯ ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಅನುಕೂಲವಾಗುವ ಹಾಗೂ ಸಮಯ ಉಳಿತಾಯವಾಗುವಂತಹ ನೂತನ ಒಪ್ಪಂದವನ್ನು ಭಾರತದ ಮೇಕ್ ಮೈ ಟ್ರಿಪ್ ಸಂಸ್ಥೆಯ ಸಹಭಾಗಿತ್ವದಲ್ಲಿ ಅನಾವರಣಗೊಳಿಸಿದೆ. ಈ ಯೋಜನೆಯಲ್ಲಿ ಪ್ರಯಾಣಿಕರು ತಮ್ಮ ವಾಟ್ಸಪ್ ನಲ್ಲಿ ರೈಲಿನ ನಂಬರ್ ಹಾಕುವ ಮೂಲಕ ರೈಲಿನ ನಿಖರ ಮಾಹಿತಿಯನ್ನು ಕ್ಷಣಮಾತ್ರದಲ್ಲೇ ತಿಳಿದುಕೊಳ್ಳಬಹುದಾಗಿದೆ. ಈ ಮೂಲಕ ಯಾವುದೇ ಅಡೆತಡೆಗಳಿಲ್ಲದೇ ಸರಿಯಾದ ಸಮಯಕ್ಕೆ ರೈಲು ಪ್ರಯಾಣವನ್ನು ಮುಂದುವರಿಸಲು ಪ್ರಯಾಣಿಕರಿಗೆ ಅನುಕೂಲವಾಗುತ್ತದೆ. ಈ ಮೊದಲು ಭಾರತೀಯ ರೈಲ್ವೇ ಇಲಾಖೆಯು ಆಪ್ ಬಿಡುಗಡೆಗೊಳಿಸಿತ್ತು. ಈ ಆ್ಯಪ್ ನಲ್ಲಿ ರೈಲು ಈಗ ಯಾವ ಪ್ರದೇಶದಲ್ಲಿ ಸಂಚರಿಸುತ್ತಿದೆ ಎನ್ನುವುದನ್ನು ತಿಳಿಯಬಹುದಿತ್ತು. ಆದರೆ ಈಗ ಆಪ್ ಇಲ್ಲದೇ ನೇರವಾಗಿ ರೈಲಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಹೇಗೆ ಮಾಹಿತಿ ಪಡೆದುಕೊಳ್ಳಬಹುದು? ರೈಲಿನ ನಿಖರ ಮಾಹಿತಿಯನ್ನು ಪಡೆಯಲು ಪ್ರಯಾಣಿಕರು, ಮೇಕ್ ಮೈ ಟ್ರಿಪ್ ನ ನೂತನ 73493 89104 ಮೊಬೈಲ್ ನಂಬರನ್ನು ತಮ್ಮ ಕಾಂಟ್ಯಾಕ್ಟ್ ನಲ್ಲಿ ಸೇವೆ ಮಾಡಿಕೊಳ್ಳಬೇಕು. ನಂತರ ಇದನ್ನು ತಮ್ಮ ವಾಟ್ಸಪ್ ನಂಬರಿನ ಮೂಲಕ ನಿಮಗೆ ಬೇಕಾದ ರೈಲಿನ ಸಂಖ್ಯೆಯನ್ನು ಹಾಕಿ ಸಂದೇಶ ಕಳುಹಿಸಿದರೆ ರೈ...

ಜೈ ಶೇಗುಣಸಿ ದಿನದ ಸುದ್ದಿ... ದಿ: 25-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 25-07-18 ** ಸಿಎಂಗೆ ಮದವೇರಿದೆ, ಬುದ್ಧಿ ಸ್ಥಿಮಿತದಲ್ಲಿಲ್ಲ: ಎಚ್ಡಿಕೆ ವಿರುದ್ಧ ಬಿಎಸ್​ವೈ ಗರಂ ** ವಿಧಾನಸೌಧದಿಂದ ನಾಲ್ಕು ಸೋಫಾ, ಒಂದು ಕಾಟ್​ ತಂದಿದ್ದೇನೆ: ಕೋಳಿವಾಡ ** ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಬೈಸಿಕಲ್ ವಿತರಿಸಿ :ಮುಖ್ಯಮಂತ್ರಿ ಎಚ್‌ಡಿಕುಮಾರಸ್ವಾಮಿ ** ಕೋಲಾರದ ಲಕ್ಷ್ಮೀ ಸಾಗರ ಕೆರೆಯನ್ನು ತಲುಪುತ್ತಿದೆ ಬೆಳ್ಳಂದೂರು ಕೆರೆ ಯಲ್ಲಿದ್ದ ವಿಷಕಾರಿ ನೊರೆ ** ರುವಾಂಡದಲ್ಲಿ ಅತೀ ಶೀಘ್ರದಲ್ಲೇ ಭಾರತೀಯ ದೂತವಾಸ ಕಚೇರಿ: ಮೋದಿ ಭರವಸೆ ** ಕಾಂಗ್ರೆಸ್​ ಮೈತ್ರಿಕೂಟ ಸೇರಬೇಕಿದ್ದರೆ ನಮ್ಮ ಮಾತನ್ನೂ ಸ್ವಲ್ಪ ಕೇಳಿ ಎಂದ ಮಾಯಾವತಿ ** ರಾಹುಲ್​ ಒಬ್ಬರೇ ಪ್ರಧಾನಿ ಅಭ್ಯರ್ಥಿಯಲ್ಲ, ಬೇರೆಯವರೂ ಇದ್ದಾರೆ: ತೇಜಸ್ವಿ ಯಾದವ್​ ** ಕೆಪಿಎಲ್ ನಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಸೇಲ್ ಆಗಿದ್ದ ಅಭಿಮನ್ಯು ಮಿಥುನ್ ಟೂರ್ನಿಯಿಂದ ಔಟ್

ರುವಾಂಡದ ಬಡ ಕುಟುಂಬಗಳಿಗೆ 200 ಗೋವು ಉಡುಗೊರೆ ನೀಡಿದ ಪ್ರಧಾನಿ ಮೋದಿ...

Image
ಜೈ ಶೇಗುಣಸಿ ಸುದ್ದಿ... ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರುವಾಂಡಕ್ಕೆ ಭೇಟಿ ನೀಡಿ ಅಲ್ಲಿನ ಬಡ ಕುಟುಂಬದವರಿಗೆ 200 ಗೋವುಗಳನ್ನು ದಾನ ಮಾಡಿದ್ದಾರೆ. ಬಡತನ ಹಾಗೂ ಬಾಲ್ಯದ ಅಪೌಷ್ಟಿಕತೆ ನಿವಾರಣೆಗೆ ಪಣ ತೊಟ್ಟಿರುವ ರುವಾಂಡ ಅಧ್ಯಕ್ಷ ಪೌಲ್​ ಕಾಗಮೆ ಅವರ ಮಹತ್ವಾಕಾಂಕ್ಷೆ ಯೋಜನೆಗೆ ಮೋದಿ ಬೆಂಬಲ ಸೂಚಿಸಿ ಈ ಅಸಾಮಾನ್ಯ ಉಡುಗೊರೆಯನ್ನು ನೀಡಿದ್ದಾರೆ. ಕಾಗಮೆ ಅವರು 2006ರಲ್ಲಿ ಗಿರಿಂಕ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಮೂಲಕ ಬಡ ಕುಟುಂಬಗಳಿಗೆ ತಮ್ಮ ಆರ್ಥಿಕ ಪರಿಸ್ಥಿತಿ ಹಾಗೂ ಅಪೌಷ್ಟಿಕತೆಯನ್ನು ನಿವಾರಿಸಿಕೊಳ್ಳಲು ಒಂದೊಂದು ಗೋವುಗಳನ್ನು ಉಡುಗೊರೆಯಾಗಿ ನೀಡಲು ಪ್ರಾರಂಭಿಸಿದರು. ಎರಡು ದಿನಗಳ ಕಾಲ ರುವಾಂಡ ಪ್ರವಾಸದಲ್ಲಿರುವ ಮೋದಿ ಇಲ್ಲಿನ ರುವರ್ ಮಾದರಿ ಗ್ರಾಮದ ಕಾರ್ಯಕ್ರಮದಲ್ಲಿ ಗೋವುಗಳನ್ನು ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಗಿರಿಂಕ ಯೋಜನೆಯನ್ನು ಉದ್ದೇಶಿಸಿ ಮಾತನಾಡಿದ ಅವರು ರುವಾಂಡ ಸರ್ಕಾರವನ್ನು ಶ್ಲಾಘಿಸಿದರು. ರೂವಾಂಡ ಗ್ರಾಮಗಳ ಆರ್ಥಿಕ ಸಬಲೀಕರಣದಲ್ಲಿ ಗೋವುಗಳ ಪ್ರಾಮುಖ್ಯತೆಯನ್ನು ಕಂಡು ಭಾರತೀಯರು ಆಶ್ಚರ್ಯದಿಂದ ನೋಡಬಹುದು. ಗಿರಿಂಕ ಯೋಜನೆ ರುವಾಂಡ ಗ್ರಾಮಗಳ ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು. ಗಿರಿಂಕ ಯೋಜನೆಯೊಂದಿಗೆ ಜೇನು ಕೃಷಿಯನ್ನು ಮಾಡುವಂತೆ ರುವಾಂಡ ಸರ್ಕಾರಕ್ಕೆ ಮೋದಿ ಸಲಹೆ ನೀಡಿದರು. ಹಾಲು ಮತ್ತು ಜೇನು ಉತ್ಪಾದನೆಯನ್ನು ಒಟ್ಟಿಗೆ ಮಾಡುವ...

ರಾಜಸ್ಥಾನದಲ್ಲಿ ಹಸುವಿನ ಹಾಲಿಗಿಂತ, ಮೂತ್ರವೇ ದುಬಾರಿ !

Image
ಜೈ ಶೇಗುಣಸಿ ಸುದ್ದಿ... ರಾಜಸ್ಥಾನದಲ್ಲಿ ಈಗ ಹಸುಗಳ ಹಾಲಿಗಿಂತ, ಮೂತ್ರವೇ ದುಬಾರಿ. ಗೋಮೂತ್ರಕ್ಕೆ ಬಹುಬೇಡಿಕೆಯಿದ್ದು ಇದು ರೈತರಿಗೆ ವರದಾನವಾಗಿ ಪರಿಣಮಿಸಿದೆ. ಹೈಬ್ರೀಡ್​ ತಳಿ ಹಸುಗಳಾದ ಗಿರ್​, ಥರ್ಪಾಕರ್​ ಹಸುಗಳ ಮೂತ್ರ ಮಾರುಕಟ್ಟೆಯಲ್ಲಿ ಒಂದು ಲೀಟರ್​ಗೆ 25 -30 ರೂಪಾಯಿಗೆ ಮಾರಾಟವಾಗುತ್ತಿದ್ದು, ಹಾಲಿನ ಬೆಲೆ 22-25 ರೂ.ಇದೆ. ಹಾಲು ಮಾರಾಟ ಮಾಡುತ್ತಿದ್ದ ಜೈಪುರದ ಕೈಲಾಶ್​ ಗುಜ್ಜರ್​ ಎಂಬುವರು ಮೊದಲು ಸಾವಯವ ಕೃಷಿಕರಿಗೆ ಗೋಮೂತ್ರದ ಉಪಯೋಗ ತಿಳಿಸಿ ಮಾರಾಟ ಮಾಡಲು ಪ್ರಾರಂಭಿಸಿದರು. ಇದರಿಂದಾಗಿ ಅವರ ಆದಾಯ ಸುಮಾರು ಶೇ. 30 ರಷ್ಟು ಹೆಚ್ಚಾಗಿದೆ ಎಂದು ಅವರೇ ತಿಳಿಸಿದ್ದಾರೆ. ಸಾವಯವ ಕೃಷಿಯಲ್ಲಿ ಕೀಟನಾಶಕಕ್ಕೆ ಪರ್ಯಾಯವಾಗಿ ಗೋಮೂತ್ರ ಬಳಸುತ್ತಾರೆ. ಹಾಗೇ ಔಷಧ, ಹಬ್ಬಗಳ ಆಚರಣೆಯ ಸಮಯದಲ್ಲೂ ಉಪಯೋಗವಾಗುತ್ತದೆ. ಹಾಗಾಗಿ ಅನೇಕ ಜನರು ಖರೀದಿಸುತ್ತಾರೆ. ಇದರಿಂದ ಹಾಲು ಕೊಡುವ ಲಾಭಕ್ಕಿಂತ ಮೂತ್ರದ ಆದಾಯ ಹೆಚ್ಚು ಎಂದಿದ್ದಾರೆ. ಹಸು ನನಗೆ ಅಮ್ಮನಂತೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಬೆಲೆಯನ್ನೂ ಏರಿಕೆ ಮಾಡಿರುವ ಕೈಲಾಶ್​, ಇಡೀ ರಾತ್ರಿಯೆಲ್ಲ ಗೋಮೂತ್ರಕ್ಕಾಗಿ ಕಾದಿದ್ದೇನೆ. ಅದು ನೆಲದ ಮೇಲೆ ಬೀಳದಂತೆ ಸಂಗ್ರಹಿಸಿದ್ದೇನೆ. ಹಸು ನನಗೆ ಅಮ್ಮನಂತೆ. ಕಳೆದ ಎರಡು ದಶಕಗಳಿಂದ ಗೋಮೂತ್ರ ಮಾರಾಟ ಮಾಡಿಯೇ ಉತ್ತಮ ಬದುಕು ಕಂಡಿದ್ದೇನೆ ಎಂದಿದ್ದಾರೆ. ಉದಯಪುರದಲ್ಲಿರುವ ಸರ್ಕಾರಿ ಕೃಷಿ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ ಮಹಾ...

ಜೈ ಶೇಗುಣಸಿ ದಿನದ ಸುದ್ದಿ... ದಿ: 24 -07 -18

ಜೈ ಶೇಗುಣಸಿ ದಿನದ ಸುದ್ದಿ... ದಿ: 24 -07 -18 **  ಸರ್ಕಾರಿ ಶಾಲಾ ಮಕ್ಕಳಿಗೆ ಮಾತ್ರ ಉಚಿತ ಬಸ್‌ಪಾಸ್‌: ಕುಮಾರಸ್ವಾಮಿ ** ನನಗೆ ಮಗಳಿರುವುದು ಸಾಬೀತಾದರೆ ಪೀಠ ತ್ಯಾಗ: ಪೇಜಾವರ ಶ್ರೀ ** ಸಂಪುಟ ವಿಸ್ತರಣೆ ಶೀಘ್ರ: ಸಿದ್ದರಾಮಯ್ಯ ** ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಶಿಫಾರಸು ಜಾರಿಗೆ, ದೀಪಾವಳಿಗೆ ಬಂಪರ್​ ಕೊಡುಗೆ ** ಸರ್ಕಾರಿ ಬಂಗಲೆಯಲ್ಲಿ ವಾಸ್ತು ದೋಷ: ನವೀಕರಣಕ್ಕೆ 2 ಕೋಟಿ ರೂ.ವೆಚ್ಚಕ್ಕೆ ರೇವಣ್ಣ ಸಿದ್ಧತೆ ** ಅನ್ಯಾಯ ಮುಂದುವರಿದರೆ ಪ್ರತ್ಯೇಕತೆಯ ಕೂಗಿಗೆ ಬಲ: ರುದ್ರಾಕ್ಷಿ ಮಠದ ಶ್ರೀ ** ಜಂತರ್​ಮಂತರ್​ನಲ್ಲಿ ಪ್ರತಿಭಟನೆ ಸಂಪೂರ್ಣ ನಿಷೇಧ ಸಾಧ್ಯವೇ ಇಲ್ಲ: ಸುಪ್ರೀಂಕೋರ್ಟ್​ ತೀರ್ಪು ** ಪ್ರಧಾನಿ ಮೋದಿ ಆಫ್ರಿಕಾ ಪ್ರವಾಸ: ರುವಾಂಡಾಗೆ 200 ದೇಸೀ ಗೋವುಗಳ ಉಡುಗೊರೆ

ಅಥಣಿಯ ಸ್ಟೇಟ್ ಬ್ಯಾಂಕಿನ ಫೀಲ್ಡ್ ಆಫೀಸರ್ ರ ಸೇವೆ ಸ್ಮರಿಸಿದ ಶೇಗುಣಸಿ ರೈತರು...!

Image
ಜೈ ಶೇಗುಣಸಿ ಸುದ್ದಿ... ಕೇವಲ ಸ್ವಾರ್ಥ-ಸಂಬಳಕ್ಕೆ ಸೀಮಿತವಾಗಿ ದುಡಿಯುವ ಈ ಕಾಲದಲ್ಲಿ ರೈತರ ಶ್ರೇಯೋಭಿವೃದ್ಧಿಗಾಗಿ, ರೈತರ ಹಿತಕ್ಕಾಗಿ ದುಡಿಯುವ ಕೆಲವರಲ್ಲಿ ಸ್ಟೇಟ್ ಬ್ಯಾಂಕ್ ಫೀಲ್ಡ್ ಆಫಿಸರ್ ಶ್ರೀ ಗಾಣಿಗೇರ ಕೂಡ ಒಬ್ಬರು. ಕಳೆದ ಕೆಲವು ವರ್ಷಗಳಿಂದ ಅಥಣಿ ಶಾಖೆಯ ಸ್ಟೇಟ್ ಬ್ಯಾಂಕಿನ ಫೀಲ್ಡ್ ಆಫೀಸರ್ ಆಗಿ ಕೆಲಸ ನಿರ್ವಹಿಸಿದ ಶ್ರೀ ಗಾಣಿಗೇರರವರು ಇಂದು ಬೇರೆ ಶಾಖೆಗೆ ವರ್ಗಾವಣೆಯಾದರು.                                    ಈ ಸಂದರ್ಭದಲ್ಲಿ ಶೇಗುಣಸಿ ರೈತರಿಂದ ಗಾಣಿಗೇರರವರಿಗೆ ಅಭಿನಂದನೆ ಮತ್ತು ಬಿಳ್ಕೊಡುಗೆ ಹಾಗೂ ಹೊಸದಾಗಿ ಅಥಣಿ ಶಾಖೆಗೆ ಸ್ಟೇಟ್ ಬ್ಯಾಂಕಿನ ಫೀಲ್ಡ್ ಆಫೀಸರ್ ಆಗಿ ನೇಮಕಗೊಂಡ  ಶ್ರೀ ಕೆ.ಬಿ. ಕೊಣ್ಣೂರ ರವರ ಸ್ವಾಗತ ಸಮಾರಂಭ ಶೇಗುಣಸಿ ರೈತರಿಂದ ಶ್ರೀ ಕಲ್ಮೇಶ್ವರ ಸಾವಯವ ಫಾರ್ಮ್ ಹೌಸ್ ನ ಸಭಾಂಗಣದಲ್ಲಿ ನೇರವೇರಿತು. ಈರ್ವರೂ ಅಧಿಕಾರಿಗಳಿಗೆ ಶೇಗುಣಸಿ ರೈತರಿಂದ ಉಡುಗೊರೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಶ್ರೀ ಶಿವರಾಯ ಯಲಡಗಿ, ಅಶೋಕ ಅಮ್ಮಣಗಿ, ಕೃಷಿ ಪಂಡಿತರಾದ ಶ್ರೀ ಕಲ್ಮೇಶ ಯಲಡಗಿ ಮತ್ತು ಬಸವರಾಜ ತೇಲಿ, ಭರತೇಶ ಶಿರಗುಪ್ಪಿ, ಮಹಾಂತೇಶ ಶಾನವಾಡ ಮತ್ತು ಅನೇಕ ರೈತರು ಉಪಸ್ಥಿತರಿದ್ದರು.

ಜೈ ಶೇಗುಣಸಿ ದಿನದ ಸುದ್ದಿ... ದಿ: 23-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 23-07-18 ** ಹಣ ಪೀಕುವ ಖಾಸಗಿ ಶಾಲೆಗಳಿಗೆ ಎಚ್ಚರಿಕೆ ನೀಡಿದ ಕುಡಚಿ ಶಾಸಕ ಪಿ.ರಾಜೀವ: ವೀಡಿಯೊ ವೈರಲ್ ** ದೇಶದ ಉತ್ತಮ ಆಡಳಿತ ನೀಡುವ ರಾಜ್ಯಗಳಲ್ಲಿ ಕೇರಳ ಫಸ್ಟ್, ಬಿಹಾರ ಲಾಸ್ಟ್, ಕರ್ನಾಟಕಕ್ಕೆ 4ನೇ ಸ್ಥಾನ. ** ಮೈತ್ರಿ ಸರ್ಕಾರದ ಬಗ್ಗೆ ಯಾರೂ ಅಪಸ್ವರ ಎತ್ತಬಾರದು: ಸಚಿವ ಡಿಕೆಶಿ ** ‘ರಾಜ್ಯ ಸರ್ಕಾರ ಮನೆಯೊಂದು‌ ಮೂರು ಬಾಗಿಲು ಆಗಿದೆ’: ಸುರೇಶ್‌ ಅಂಗಡಿ ** ಮೋದಿ ಸರ್ಕಾರದ ಕೌಂಟ್‌ಡೌನ್‌ ಶುರು: ಸೋನಿಯಾ ಗಾಂಧಿ ** ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ 150 ಸೀಟು ಗೆಲ್ಲಬಹುದು: ಪಿ. ಚಿದಂಬರಂ ಭರವಸೆ. *" ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ್ ಇಂದು ವಿಧಿವಶ. ** ಲೋಕಸಭೆಗೂ ಒಟ್ಟಾಗಿ ಹೋದರೆ ಒಳಿತಾಗುತ್ತದೆ ಎಂಬ ನಂಬಿಕೆಯಿದೆ: ಡಿಸಿಎಂ ಪರಮೇಶ್ವರ್​ ** ಶೀರೂರು ಮಠದ ಆಡಳಿತಕ್ಕಾಗಿ ಐವರು ಸದಸ್ಯರ ಸಮಿತಿ ರಚನೆಗೆ ನಿರ್ಧಾರ

ಜೈ ಶೇಗುಣಸಿ ದಿನದ ಸುದ್ದಿ... ದಿ: 22-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 22-07-18 ** ಸ್ಯಾನಿಟರಿ ನ್ಯಾಪ್ಕಿನ್, ರಾಖಿ… ಮೇಲಿನ ಜಿಎಸ್​ಟಿ ರದ್ದು ** ಹರಕೆ ತೀರಿಸೋಕೆ ಶಬರಿಮಲೆಗೆ ಹೊರಟ್ರು ಸಚಿವ ಡಿಕೆಶಿ ** ಸೂರ್ಯನ ಅತೀ ಸಮೀಪ ಗಗನ ನೌಕೆ ಕಳಿಸಲು ನಾಸಾ ಸಿದ್ಧತೆ ** ಪ್ರಧಾನಿ ಮೋದಿಯ 'ಒಂದು ದೇಶ-ಒಂದು ಚುನಾವಣೆ' ಪರಿಕಲ್ಪನೆಗೆ ಬಿಎಸ್ವೈ ಬೆಂಬಲ. ** ಸಾಲಮನ್ನಾವೆ ರೈತರ ಎಲ್ಲ ಸಮಸ್ಯೆಗಳಿಗೆ ಪರಿಹಾರವಲ್ಲ: ಕೃಷಿ ಸಚಿವ ** ಕಣ್​ ಹೊಡೆದು ಬೇಜವಾಬ್ದಾರಿತನ ತೋರಿದರು ರಾಹುಲ್: ಬಿಎಸ್ವೈ ** 2019 ರ ಲೋಕಸಭಾ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದೊಂದಿಗೆ ಸೇರುವುದಿಲ್ಲ: ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ** ಜಗತ್ತಿನೆದುರು ಭಾರತದ ರಾಜಕಾರಣಿಗಳ ಘನತೆ ಮುಕ್ಕಾಗಿಸಿದ ರಾಹುಲ್‌: ಅರುಣ್ ಜೇಟ್ಲಿ ** ಕೆಪಿಎಲ್​ನಲ್ಲಿ 8.30 ಲಕ್ಷ ರೂ.ಗೆ ಅಭಿಮನ್ಯು ಮಿಥುನ್​ ಹರಾಜು; ಉತ್ತಪ್ಪಗೆ 7.90 ಲಕ್ಷ

ಜೈ ಶೇಗುಣಸಿ ದಿನದ ಸುದ್ದಿ... ದಿ: 21-07-2017

ಜೈ ಶೇಗುಣಸಿ ದಿನದ ಸುದ್ದಿ... ದಿ: 21-07-2017 ** ಕಬ್ಬು ಪೂರೈಸಿದರೂ ಬಿಡುಗಡೆಯಾಗದ ಹಣ: ಸಕ್ಕರೆ ಕಾರ್ಖಾನೆ ಎದುರೇ ಶೇಗುಣಸಿ ರೈತ ಹಣಮಂತ ಆತ್ಮಹತ್ಯೆ ** ಕೆಆರ್​ಎಸ್, ಕಬಿನಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ದಂಪತಿಗಳಿಂದ ಬಾಗಿನ ** ಮೋದಿಯನ್ನು ಆಲಿಂಗಿಸಿದ ರಾಹುಲ್​ಗೆ ಸದನ ಶಿಸ್ತು ಪಾಲಿಸಿ ಎಂದು ಸ್ಪೀಕರ್​ ಪಾಠ ** ಶೀರೂರು ಶ್ರೀಗಳ ಸಾವು ಕೊಲೆಯಲ್ಲ: ಪೇಜಾವರ ಶ್ರೀ ** ಪ್ರತ್ಯೇಕ ರಾಜ್ಯಕ್ಕಾಗಿ ನಾನೇ ಮುಂದಾಳತ್ವ ವಹಿಸುತ್ತೇನೆ: ಶ್ರೀರಾಮುಲು. ** ವಿರೋಧ ಪಕ್ಷಗಳಲ್ಲೇ ಪರಸ್ಪರ ನಂಬಿಕೆ ಇಲ್ಲ: ರಾಜನಾಥ್​ ಸಿಂಗ್​ ** ಮೋದಿ ಸರ್ಕಾರದ್ದು ಖಾಲಿ ಭರವಸೆಗಳ ವೀರಚರಿತೆ: ಟಿಡಿಪಿ ** ಅವಿಶ್ವಾಸದ ಚರ್ಚೆ: ಮೋದಿಗೆ ನನ್ನ ಕಣ್ಣಿನಲ್ಲಿ ಕಣ್ಣಿಟ್ಟು ಮಾತನಾಡಲು ಆಗುತ್ತಿಲ್ಲ ಎಂದ ರಾಹುಲ್ ** ಸೈಬರ್​ ದಾಳಿ​: ಸಿಂಗಾಪುರ ಪ್ರಧಾನಿಯ ವೈಯಕ್ತಿಕ ಮಾಹಿತಿಗೆ ಕನ್ನ ** ರಾಫೆಲ್ ಡೀಲ್ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ: ರಾಹುಲ್ ಆರೋಪ ತಳ್ಳಿಹಾಕಿದ ಫ್ರಾನ್ಸ್

ಕಬ್ಬು ಪೂರೈಸಿದರೂ ಬಿಡುಗಡೆಯಾಗದ ಹಣ: ಸಕ್ಕರೆ ಕಾರ್ಖಾನೆ ಎದುರೇ ಶೇಗುಣಸಿ ರೈತ ಆತ್ಮಹತ್ಯೆ

Image
ಜೈ ಶೇಗುಣಸಿ ಸುದ್ದಿ... ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬೇಸತ್ತ ರೈತರೊಬ್ಬರು ಕಾರ್ಖಾನೆ ಎದುರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿಯ ಶೇಗುಣಸಿ ಗ್ರಾಮದ ರೈತ ಹನುಮಂತಪ್ಪ ಕಾಡಪ್ಪನವರು ಆತ್ಮಹತ್ಯೆ ಮಾಡಿಕೊಂಡವರು. ಸಾವರಿನ್​ ಶುಗರ್ಸ್​ ಕಂಪನಿಗೆ 200 ಟನ್​ ಕಬ್ಬು ಪೂರೈಸಿದ್ದ ಹುನುಮಂತಪ್ಪ ಅವರಿಗೆ ಈ ವರಗೆ ಹಣ ಬಿಡುಗಡೆಯಾಗಿರಲಿಲ್ಲ. ಈ ನಡುವೆ ರೈತ ಹನುಮಂತಪ್ಪ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಒಂದೆಡೆ ಕಬ್ಬಿನ ಹಣ ಸಿಗದೆ, ಸಾಲದ ಸಮಸ್ಯೆ ತಾಳಲಾರದೆ ಅವರು ಕಾರ್ಖಾನೆಯ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾವರಿನ್​ ಶುಗರ್ಸ್​ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶಿವಕುಮಾರ್​ ಮಲಘಾಣ ಎಂಬುವವರ ಮಾಲಿಕತ್ವದ್ದಾಗಿದೆ. ತೇರದಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಜೈ ಶೇಗುಣಸಿ ದಿನದ ಸುದ್ದಿ... ದಿ: 20-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 20-07-18 ** ಕೊಡಗಿನ ಜನತೆಯ ಸಮಸ್ಯೆ ಪರಿಹರಿಸಲು ಸರಕಾರ ಸಿದ್ಧ: ಎಚ್‌ಡಿಕೆ. ** ಅಧಿಕಾರಿಗಳು ಲಂಚ ಪಡೆಯದೆ ಕೆಲಸ ಮಾಡಬೇಕು: ಬಾದಾಮಿ ಶಾಸಕ ಸಿದ್ದರಾಮಯ್ಯ ** ಸವಾಲು ಹಾಕಿದ್ದ ಕೊಡಗಿನ ಬಾಲಕನ ಭೇಟಿ ಮಾಡಿದ ಸಿಎಂ ಎಚ್‌ಡಿಕೆ. ** ಲೋಕಸಭೆ ಚುನಾವಣೆ ಸಿದ್ಧತೆಯಾಗಿ ನರೇಂದ್ರ ಮೋದಿತ ಜುಲೈ 29ರಂದು ಚಿಕ್ಕೋಡಿಯ ರೈತರ ಸಮ್ಮೇಳನದಲ್ಲಿ ಭಾಗಿ. ** ಹಾರಂಗಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಕುಮಾರಸ್ವಾಮಿ ** ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಯೋಗಗರು ಬಾಬಾ ರಾಮ್‌ದೇವ್ ಪರೋಕ್ಷ ವಾಗ್ದಾಳಿ ** ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಮಸೂದೆ: ಆಸ್ತಿ ಸ್ವಾಧೀನಕ್ಕೆ ಲೋಕಸಭೆ ಅನುಮೋದನೆ ** ಲೋಕಪಾಲ ಸಭೆಯನ್ನು ಬಹಿಷ್ಕರಿಸಿದ ಮಲ್ಲಿಕಾರ್ಜುನ ಖರ್ಗೆ ** ಅವಿಶ್ವಾಸದ ಅಗ್ನಿಪರೀಕ್ಷೆ: ಬಿಜೆಪಿ ಬೆನ್ನಿಗೆ ನಿಂತ ಶಿವಸೇನೆ

ಕೇಂದ್ರ ಸರ್ಕಾರದಿಂದ ಕಬ್ಬಿಗೂ ಸಿಕ್ತು ಬೆಂಬಲ ಬೆಲೆ...!

Image
ಜೈ ಶೇಗುಣಸಿ ಸುದ್ದಿ.... ಕಾರ್ಖಾನೆಗಳು ಕಬ್ಬು ಬೆಳೆಗಾರರಿಂದ ಖರೀದಿಸುವ ಕಬ್ಬಿಗೆ ನೀಡುವ ಕನಿಷ್ಠ ಬೆಲೆಯನ್ನು ಟನ್‌ಗೆ 200 ರು. ಹೆಚ್ಚಿಸಲು  ಅಂದರೆ ಪ್ರತಿ ಟನ್‌ಗೆ 2750 ರು. ನಿಗದಿಪಡಿಸಲು ಕೇಂದ್ರ ಸರ್ಕಾರ ಬುಧವಾರ ನಿರ್ಧರಿಸಿದೆ. ಅಕ್ಟೋಬರ್‌ನಿಂದ ಆರಂಭಗೊಳ್ಳುವ 2018 - 19ರ ಮಾರುಕಟ್ಟೆ ವರ್ಷದಿಂದ ಕಬ್ಬಿಗೆ ನ್ಯಾಯಯೋಜಿತ ಹಾಗೂ ಸಂಭಾವ್ಯ ಬೆಲೆ (ಎಫ್ ಆರ್‌ಪಿ)ಯನ್ನು ಏರಿಸುವ ನಿರ್ಧಾರವನ್ನು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆಯಲ್ಲಿ ಕೈಗೊಳ್ಳಲಾಗಿದೆ. ಸರ್ಕಾರ ಇತ್ತೀಚೆಗೆ ಭತ್ತ ಸೇರಿದಂತೆ ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಭಾರೀ ಪ್ರಮಾಣದಲ್ಲಿ ಏರಿಕೆ ಮಾಡಿದ ಬೆನ್ನಲ್ಲೇ, ರೈತರಿಗೆ ಇನ್ನೊಂದು ಸಿಹಿ ಸುದ್ದಿ ನೀಡಿದೆ. ಕೃಷಿ ವೆಚ್ಚಗಳು ಹಾಗೂ ಬೆಲೆಗಳ ಆಯೋಗ ಪ್ರತಿ ಕ್ವಿಂಟಾಲ್ ಕಬ್ಬಿನ ನ್ಯಾಯಯೋಜಿತ ಹಾಗೂ  ಸಂಭಾವ್ಯ ಬೆಲೆಯನ್ನು ಮುಂದಿನ ಋತು ವಿನಿಂದ ಕ್ವಿಂಟಕ್‌ಗೆ 20 ರು. ಹೆಚ್ಚಳ ಮಾಡುವಂತೆ ಶಿಫಾರಸು ಮಾಡಿತ್ತು. ಇದರಂತೆ ಸರ್ಕಾರ ಖರೀದಿ ದರವನ್ನು ಏರಿಕೆ ಮಾಡಿದೆ. ಈ ಮುನ್ನ ಸಕ್ಕರೆ ಕಾರ್ಖಾನೆಗಳು ಪ್ರತಿ ಕ್ವಿಂಟಾಲ್ ಕಬ್ಬಿಗೆ 255 ರು. ನ್ಯಾಯಯೋಜಿತ ಬೆಲೆ ನೀಡುತ್ತಿದ್ದವು. 

ಜೈ ಶೇಗುಣಸಿ ದಿನದ ಸುದ್ದಿ... ದಿ: 19-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 19-07-18 * *  ವಿವಿ ಸಿಂಡಿಕೇಟ್ ಸದಸ್ಯರ ನೇಮಕಕ್ಕೆ ಸಿದ್ದರಾಮಯ್ಯ ಸಲಹೆ ಪಡೆಯುತ್ತೇವೆ: ಜಿಟಿಡಿ ** ಕಾಮನ್​ವೆಲ್ತ್​ ಗೇಮ್ಸ್​ನ ವೇಟ್​ಲಿಫ್ಟಿಂಗ್​ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಗುರುರಾಜ್​ ಪೂಜಾರಿಗೆ 25ಲಕ್ಷ ನಗದು ಬಹುಮಾನ: ಕ್ರೀಡಾ ಸಚಿವ ಡಾ. ಜಿ. ಪರಮೇಶ್ವರ್​. ** ಮುಂದಿನ ಐದು ವರ್ಷಗಳ ಕಾಲ ಎಚ್ ಡಿ ಕುಮಾರಸ್ವಾಮಿಯೇ ಮುಖ್ಯಮಂತ್ರಿಯಾಗಿರಲಿ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್. ** ದೇಶದ್ರೋಹದ ಕಾನೂನಿನ ವ್ಯಾಪ್ತಿ, ಪರಿಧಿಯ ಬಗ್ಗೆ ಕಾನೂನಿ ಸಮಿತಿಯಿಂದ ಪರಿಶೀಲನೆ: ಕೇಂದ್ರ ಸರ್ಕಾರ ** ದುಬಾರಿ ಐಫೋನ್ ಗಿಫ್ಟ್ ವಾಪಸ್ ಗೆ ಬಿಜೆಪಿ ಸಂಸದರು ನಿರ್ಧಾರ: ಅನಂತ್ ಕುಮಾರ್ ** ರಾಜ್ಯಸಭೆಯ ಸದಸ್ಯರು ದೇಶದ 22 ಭಾಷೆಗಳಲ್ಲೂ ಮಾತನಾಡಬಹುದು: ವೆಂಕಯ್ಯ ನಾಯ್ಡು. ** ಶಬರಿಮಲೆ ದೇಗುಲ ಪ್ರವೇಶ ಮಹಿಳೆಯರ ಸಾಂವಿಧಾನಿಕ ಹಕ್ಕು ಎಂದ ಸುಪ್ರೀಂಕೋರ್ಟ್​ ** ಇಂಗ್ಲೆಂಡ್ ವಿರುದ್ಧ ಟೆಸ್ಟ್ ಗೆ ಭಾರತ ತಂಡ ಪ್ರಕಟ: ಕುಲದೀಪ್, ಕಾರ್ತಿಕ್, ಪಂತ್ ಗೆ ಸ್ಥಾನ

ಜೈ ಶೇಗುಣಸಿ ದಿನದ ಸುದ್ದಿ... ದಿ: 18-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 18-07-18 ** ಜಮಖಂಡಿ-ಮಿರಜ ರಾಷ್ಟ್ರೀಯ ಹೆದ್ದಾರಿಯಲ್ಲಿರುವ, ಮಹಾರಾಷ್ಟ್ರ-ಕರ್ನಾಟಕ ಸಂಪರ್ಕ ಕಲ್ಪಿಸುವ ಕುಡಚಿ ಸೇತುವೆ ಜಲಾವೃತ. ** ಸಿದ್ದರಾಮಯ್ಯ ಮಾಧ್ಯಮಗಳಿಗೆ ಪತ್ರ ಬಿಡುಗಡೆ ಮಾಡಿದ್ದು ತಪ್ಪು: ಮಾಜಿ ಸ್ಪೀಕರ್​ ಕೆ.ಬಿ ಕೋಳಿವಾಡ. ** ರಾಜ್ಯಾದ್ಯಂತ ಮುಂದುವರಿದ ಮಳೆ:  ಕೊಡಗು, ಪಿರಿಯಾಪಟ್ಟಣದಲ್ಲಿ ಶಾಲೆಗಳಿಗೆ ರಜೆ ಘೋಷಣೆ . ** ಯಾವುದೇ ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸದಂತೆ ಪ್ರವೀಣ್ ತೊಗಾಡಿಯಾ ಗೆ ಗುವಾಹತಿ ಪೊಲೀಸರಿಂದ ನಿಷೇಧ. ** ಲೋಕಸಭೆಯಲ್ಲಿ ಬಿಜೆಪಿ ಮುಖ್ಯ ಸಚೇತಕರಾಗಿ ಅನುರಾಗ್ ಥಾಕೂರ್ ನೇಮಕ ** ಸಂಸದರಿಗೆ ಐಫೋನ್, ಬ್ಯಾಗ್ ಗಿಫ್ಟ್ ಕೊಟ್ಟಿದ್ದು ನಾನೇ: ಸಚಿವ ಡಿಕೆ ಶಿವಕುಮಾರ್ ** ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ :ಸುಗಮ ಕಲಾಪಕ್ಕೆ ಸಹಕರಿಸುವಂತೆ ಸರ್ವ ಪಕ್ಷ ಸಭೆಯಲ್ಲಿ ಪ್ರಧಾನಿ ಮನವಿ ** ಕ್ರಿಕೆಟ್: ಆಂಗ್ಲರ ವಿರುದ್ಧ ಭಾರತಕ್ಕೆ ಗೆಲುವು.. ವಿದೇಶಗಳಲ್ಲಿ ಸರಣಿ ಗೆಲುವಿನ ನಾಗಾಲೋಟ ಮುಂದುವರೆಸಿದ ಕೊಹ್ಲಿ ಪಡೆ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 17-07-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 17-07-18 ** ಎಚ್​ಡಿಕೆ ಕಣ್ಣೀರನ್ನು ವ್ಯಾಖ್ಯಾನಿಸುವುದು ಸರಿಯಲ್ಲ: ಸತೀಶ್​ ಜಾರಕಿಹೊಳಿ. ** ಉತ್ತರ ಕರ್ನಾಟಕದ ನಾಯಿ ನರಿಗಳಿಗೂ ಬಜೆಟ್ ಉಪಯೋಗವಾಗಲ್ಲ: ರಮೇಶ್​ ಜಿಗಜಿಣಗಿ. ** ಸಿಂಡಿಕೇಟ್​ ಸದಸ್ಯರ ಮುಂದುವರಿಕೆ ಇಲ್ಲ: ಸಿದ್ದುಗೆ ಜೆಟಿಡಿ ತಿರುಗೇಟು ** ಸಿಎಂ ಕುಮಾರಸ್ವಾಮಿ ಕಣ್ಣೀರಿಗೆ ಕಾಂಗ್ರೆಸ್ ಮುಖಂಡರೇ ಕಾರಣ: ಕೆಬಿ ಕೋಳಿವಾಡ ** ಪ್ರತ್ಯೇಕ ಲಿಂಗಾಯಿತ ಧರ್ಮದ ಹೋರಾಟ ಮತ್ತೆ ಆರಂಭವಾಗಲಿದೆ: ಮಾಜಿ ಸಚಿವ ಎಂ. ಬಿ. ಪಾಟೀಲ್ ** ಕಾಂಗ್ರೆಸ್ ಓಲೈಕೆ ರಾಜಕಾರಣದಿಂದ ಭಾರತಕ್ಕೆ ಹಾನಿ: ಪ್ರಕಾಶ್ ಜಾವಡೇಕರ್. ** ಅಮಿತ್ ಶಾ ಸೂಚಿಸಿದ್ದೇ ಆದರೆ, ಸಂತಸದಿಂದ ಕರ್ನಾಟಕದಲ್ಲಿ ಸರ್ಕಾರ ರಚಿಸುತ್ತೇನೆ: ಸುಬ್ರಮಣಿಯನ್ ಸ್ವಾಮಿ. ** ** ಮಹಿಳಾ ಮೀಸಲು ಮಸೂದೆ ಅಂಗೀಕರಿಸಿ, ಬೇಷರತ್​ ಬೆಂಬಲ ನೀಡುತ್ತೇವೆ: ಮೋದಿಗೆ ರಾಹುಲ್​ ಸವಾಲು.

ಜೈ ಶೇಗುಣಸಿ ದಿನದ ಸುದ್ದಿ.. ದಿ: 16-07-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 16-07-18 ** ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಕಾಂಗ್ರೆಸ್‌ ವಿಷ ನೀಡಿಲ್ಲ. ಬದಲಿಗೆ ಅಮೃತವನ್ನು ನೀಡಿದೆ: ಶಾಸಕ ಡಾ. ಸುಧಾಕರ್‌. ** ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿಲ್ಲ: ಎಚ್‌.ಡಿ.ದೇವೇಗೌಡ. ** ನನ್ನ ಲೀಡ್ ಕಂಡು ಪ್ರಧಾನಿ ನರೇಂದ್ರ ಮೋದಿಯೇ ನಡುಗಿ ಹೋಗಿದ್ದರು: ಸಚಿವ ಜಿಟಿ ದೇವೇಗೌಡ. ** ಶಿರಾಡಿಘಾಟ್​ ಮಾರ್ಗ ಸಂಚಾರ ಮುಕ್ತ: ಇನ್ನೂ 15ದಿನ ದೊಡ್ಡ ವಾಹನಗಳಿಗೆ ಇಲ್ಲ ಅವಕಾಶ. ** ಗೋ ರಕ್ಷಕರು ಪ್ರಧಾನಿ ಮೋದಿ ಮಾತಿಗೆ ಸ್ಪಂದಿಸದೇ ಇರುವುದು ಆತಂಕಕಾರಿ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ. ** ಬಜೆಟ್ ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ. ** ಕೆವಿನ್‌ ಆಂಡರ್‌ಸನ್‌ ವಿರುದ್ಧ ಜಯಗಳಿಸಿದ ಸರ್ಬಿಯಾ ಹುಲಿ ನೋವಾಕ್‌ ಜೋಕೊವಿಚ್‌ ವಿಂಬಲ್ಡನ್‌ ಚಾಂಪಿಯನ್. ** ಫಿಫಾ ವಿಶ್ವಕಪ್ 2018 ಬಿಗ್ ಫೈನಲ್- ಕ್ರೊಯೇಷ್ಯಾ ವಿರುದ್ಧ ಗೆದ್ದ ಫ್ರಾನ್ಸ್ ಚಾಂಪಿಯನ್.

ಜೈ ಶೇಗುಣಸಿ ದಿನದ ಸುದ್ದಿ... ದಿ: 10-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 10-07-18 ** ಸಂಪೂರ್ಣ ಸಾಲಮನ್ನಾಕ್ಕಾಗಿ ಸಿಡಿದೆದ್ದ ಅನ್ನದಾತರು-ಫ್ರೀಡಂ ಪಾರ್ಕ್ ಮುಂದೆ ರೈತರಿಂದ ಪ್ರತಿಭಟನೆ. ** ಬಂಡೆಪ್ಪ ಕಾಶೆಂಪುರ ಸಂಧಾನ ಯಶಸ್ವಿ- ಧರಣಿ ಕೈಬಿಟ್ಟ ರೈತರು, ಸಿಎಂ ಜೊತೆ ಚರ್ಚೆ ನಡೆಸಿ ಮುಂದಿನ ನಿರ್ಧಾರ. ** ಸಂಪೂರ್ಣ ಸಾಲಮನ್ನಾಕ್ಕೆ ಜು.30ರ ವರೆಗೆ ಅವಕಾಶ, ಸಿಎಂಗೆ ಗಡುವು ನೀಡಿದ ರೈತರು. ** ಎಚ್ಡಿಕೆ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು: ಬಿಎಸ್ವೈ ಆಗ್ರಹ ** ದ.ಕನ್ನಡ ಜಿಲ್ಲೆ ಕೆಲವೆಡೆ ಭೂಕಂಪ. ** ಲೋಕಸಭಾ ಚುನಾವಣೆಗೆ ತಯಾರಾಗಿ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ** ನೋಯ್ಡಾದಲ್ಲಿ ವಿಶ್ವದ ಅತಿದೊಡ್ಡ  ಸ್ಯಾಮ್ ಸಂಗ್ ನ ಮೊಬೈಲ್ ಫೋನ್ ಕಾರ್ಖಾನೆ ಉದ್ಘಾಟನೆ. ಪ್ರಧಾನಿ ಮೋದಿ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜಯಿ ಇನ್ ಉಪಸ್ಥಿತಿ. ** ನಿರ್ಭಯಾ ಅತ್ಯಾಚಾರ- ಕೊಲೆ ಆರೋಪಿಗೆ ಗಲ್ಲು: ಹೈಕೋರ್ಟ್ ತೀರ್ಪು ಎತ್ತಿ ಹಿಡಿದ ಸುಪ್ರೀಂ.

ಜೈ ಶೇಗುಣಸಿ ದಿನದ ಸುದ್ದಿ... ದಿ: 09-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 09-07-18 ** ಪ್ರತ್ಯೇಕ ರಾಜ್ಯಕ್ಕಾಗಿ ಉತ್ತರ ಕರ್ನಾಟಕ ರೈತರಿಂದ ಅ.2ರಂದು ಉ.ಕ ಬಂದ್ . ** ಮೋದಿ ಧಮ್ ಇದ್ರೆ ರಾಮ ಮಂದಿರಕ್ಕೆ ಪಾಯ ಹಾಕಲಿ: ಬೆಳ್ಳುಬ್ಬಿ. ** ಸಮ್ಮಿಶ್ರ ಸರ್ಕಾರ ಕೆಲವೇ ದಿನಗಳಲ್ಲಿ ಮುಳುಗಲಿದೆ: ಸಚಿವ ಡಿವಿಎಸ್. **2019ರ ಲೋಕಸಭೆ ಚುನಾವಣೆಯಲ್ಲೂ ಎನ್‌ಡಿಎ ಜತೆಗಿರಲಿದೆ ಜೆಡಿಯು: ನಿತೀಶ್ ** ಅಮೆರಿಕದ ಕನ್ಸಾಸ್ ಸಿಟಿಯಲ್ಲಿ ಹತ್ಯೆಗೀಡಾದ ಭಾರತೀಯ ಮೂಲದ ವಿದ್ಯಾರ್ಥಿಯ ಕುಟುಂಬಕ್ಕೆ ಸಾಂತ್ವನ ಹೇಳಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ** ಕಾಂಗ್ರೆಸ್ ನಾಯಕ ಚಿದಂಬರಂ ಮನೆಯಲ್ಲಿ ಕಳವು: ನಗದು, ಚಿನ್ನಾಭರಣ ನಾಪತ್ತೆ. ** ಜಿಮ್ನಾಸ್ಟಿಕ್ಸ್ ವರ್ಲ್ಡ್ ಚಾಲೆಂಜ್ ಕಪ್‌: ಚಿನ್ನ ಗೆದ್ದ ದೀಪಾ ಕರ್ಮಾಕರ್​. ** ಕ್ರಿಕೆಟ್: ಇಂಗ್ಲೆಂಡ್ ವಿರುದ್ಧದ ಮೂರನೇ ಟಿ-20 ಪಂದ್ಯದಲ್ಲಿ ಭಾರತಕ್ಕೆ ಜಯ; ರೋಹಿತ್ ಶತಕ. ಪಾಂಡ್ಯ ಆಲ್ ರೌಂಡರ್ ಆಟ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 08-07-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 08-07-18 ** ಮಹಾರಾಷ್ಟ್ರದಲ್ಲಿ ಭಾರಿ ಮಳೆ:  ಕಲ್ಲೋಳ–ಯಡೂರು ಹಾಗೂ ದತ್ತವಾಡ–ಮಲಿಕವಾಡ ಗ್ರಾಮಗಳ 2 ಸೇತುವೆ ಮುಳುಗಡೆ. ** ಮೆಟ್ರೋ ಕಾಮಗಾರಿಗೆ ಇನ್ಫೋಸಿಸ್ ಫೌಂಡೇಷನ್ ನಿಂದ 200ಕೋಟಿ ರೂ. ನೆರವು ** ಕರಾವಳಿಯಲ್ಲಿ ಮುಂದುವರೆದ ಮಳೆ ಅಬ್ಬರ. ** ಹೊಸ ಉದ್ಯಮಿಗಳ ಪಾಲಿಗೆ ಬೆಂಗಳೂರು ಸ್ವರ್ಗ: ಸಮಿಕ್ಷೆ ವರದಿ. ** ನೀರಾವರಿ ಅಧಿಕಾರಿಗಳಿಗೆ ಸಚಿವ ಡಿಕೆಶಿ ಛೀಮಾರಿ. ** ಬೆಳಗಾವಿಯ ನವಿಲು ತೀರ್ಥ ಜಲಾಶಯದಿಂದ ಮಲಪ್ರಭಾ ನದಿಗೆ ನೀರು ಬಿಡುಗಡೆ ಮಾಡುವಂತೆ ಕೇಳಿದ ಸಿದ್ದರಾಮಯ್ಯ. ** ಮಾನಸ ಸರೋವರ ಯಾತ್ರೆ: ನೇಪಾಳದಿಂದ ಎಲ್ಲಾ ಭಾರತೀಯರ ಸ್ಥಳಾಂತರ ** ವಾರೆನ್ ಬಫೆಟ್ ಹಿಂದಿಕ್ಕಿದ ಫೇಸ್ ಬುಕ್ ಸಂಸ್ಥಾಪಕ ಝುಕರ್‍ಬರ್ಗ್ ವಿಶ್ವದ ಮೂರನೇ ಶ್ರೀಮಂತ! ** ಫಿಫಾ ವಿಶ್ವಕಪ್ ಟೂರ್ನಿ- ಸ್ವಿಫ್ಟ್ ವಿರುದ್ಧ ಗೆದ್ದ ಇಂಗ್ಲೆಂಡ್, ರಷ್ಯಾ ವಿರುದ್ಧ ಗೆದ್ದ ಕ್ರೋಟಿಯಾ ಸೆಮಿಫೈನಲ್ ಗೆ.

ಭಸ್ಮವನ್ನು ಯಾಕೆ ಹಚ್ಚಿಕೊಳ್ಳಬೇಕು?ಹೇಗೆ ಹಚ್ಚಿಕೊಳ್ಳಬೇಕು? ಎಂಬ ವಿವರ ಇಲ್ಲಿದೆ ನೋಡಿ.

Image
ಜೈ ಶೇಗುಣಸಿ ಸುದ್ದಿ... ಹಿಂದೂ ಸಂಪ್ರದಾಯದಲ್ಲಿ ಕೆಲವರು ಭಸ್ಮವನ್ನು ದೇವರ ಪ್ರಸಾದವೆಂದುಹಣೆಗೆ ಹಚ್ಚಿಕೊಳ್ಳುತ್ತಾರೆ. ಕೆಲವರು ಅದನ್ನು ಕೈಕಾಲು ಮೈಗೂ ಕೂಡ ಹಚ್ಚಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಇದನ್ನು ಯಾಕೆ ಹಚ್ಚಿಕೊಳ್ಳಬೇಕು?ಹೇಗೆ ಹಚ್ಚಿಕೊಳ್ಳಬೇಕು? ಎಂಬ ವಿವರ ಇಲ್ಲಿದೆ ನೋಡಿ. ನಮ್ಮ ಶಾಸ್ತ್ರದಲ್ಲಿ ಆಕಳಿನ ಸಗಣಿಯನ್ನು ಮಂತ್ರ ಪುರಸ್ಸರವಾಗಿ ಸುಡಬೇಕು. ಹೀಗೆ ತಯಾರಾದ ಭಸ್ಮಕ್ಕೆ ವಿಭೂತಿ ಎನ್ನುತ್ತಾರೆ. ಈ ವಿಭೂತಿಗೆ ಭಸಿತ ಅಥವಾ ರಕ್ಷಾ ಎಂತಲೂ ಕರೆಯುತ್ತಾರೆ. ಭ ಎಂದರೆ ಪಾಪಗಳ ಭರ್ತನ ಮತ್ತು ಸ್ಮ ಎಂದರೆ ಈಶ್ವರನ ಸ್ಮರಣೆ. ಹಾಗಾಗಿ ಭಸ್ಮ ಧಾರಣೆಯನ್ನು ಮಾಡುವಾಗ ಈಶ್ವರನ ಸ್ಮರಣೆಯನ್ನು ಮಾಡಬೇಕು. ಅಂದರೆ ಓಂ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು ಜಪಿಸಬೇಕು. ಇದರಿಂದ ಒಳ್ಳಯದಾಗುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ವಿಭೂತಿ ಧಾರಣೆಯನ್ನು ಬಲಗೈಯಲ್ಲಿ ಇರುವ ಮಧ್ಯದ ಮೂರು ಬೆರಳುಗಳಿಂದ ಹಣೆಗೆ ಹಾಗೂ ಇನ್ನಿತರ ದೇಹದ ಭಾಗಗಳಿಗೆ ಹಚ್ಚಿಕೊಳ್ಳಬೇಕು. ತ್ರಿಪುಂಡ್ರವೆಂದರೆ ಮೂರು ಎಂದರ್ಥ. ಅದು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರನ್ನು ಸೂಚಿಸುತ್ತದೆ. ನಮ್ಮ ಜೀವನದ ಸುರಕ್ಷತೆಗೆ ಜ್ಞಾನ,ಭಕ್ತಿ, ವೈರಾಗ್ಯ ಬೇಕೆನ್ನುವ ಸಂಕೇತವಾಗಿದೆ. ತ್ರಿಪುಂಡ್ರವನ್ನು ಇಡಾ, ಪಿಂಗಳ ಮತ್ತು ಸುಷುಮ್ನಾ ನಾಡಿ ಎಂತಲೂ ಕರೆಯುತ್ತಾರೆ. ಮನುಷ್ಯನ ಶರೀರದಲ್ಲಿರುವ 72 ಸಾವಿರ ನಾಡಿಗಳ ಸಮತೋಲನಕ್ಕೆ ವಿಭೂತಿ ಧಾರಣೆ ಉಪಯುಕ...

ಜೈ ಶೇಗುಣಸಿ ದಿನದ ಸುದ್ದಿ... ದಿ: 07-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 07-07-18 ** ಉತ್ತರ ಕರ್ನಾಟಕ, ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಬಜೆಟ್ ವಿರೋಧಿಸಿ ಪ್ರತಿಭಟನೆ. ** ವಿಧಾನಸಭೆಯ ಉಪಸಭಾಧ್ಯಕ್ಷರಾಗಿ ಚಿಂತಾಮಣಿ ಶಾಸಕ ಎಂ. ಕೃಷ್ಣಾರೆಡ್ಡಿ ಅವಿರೋಧವಾಗಿ ಆಯ್ಕೆ. ** ದೇವೇಗೌಡರು-ರೇವಣ್ಣರದ್ದು ಒಂದೇ ಜಾತಕ, ಕುಮಾರಸ್ವಾಮಿಯವರದ್ದು ಸ್ವತಂತ್ರ: ಬಸವರಾಜ ಬೊಮ್ಮಾಯಿ. ** ಎಸ್‌ಬಿಐನಿಂದ ವಿಜಯ್‌ ಮಲ್ಯ ಆಸ್ತಿ ಹರಾಜು: ಯುಕೆ ಹೈಕೋರ್ಟ್‌ ಆದೇಶಕ್ಕೆ ಸಂತಸ. ** ಸುಪ್ರೀಂ ಆದೇಶ ಧಿಕ್ಕರಿಸಿದ ಕೇಂದ್ರ ಸರ್ಕಾರ, ಲೆಫ್ಟಿನೆಂಟ್ ಗವರ್ನರ್ ವಿರುದ್ಧ ಕೇಜ್ರಿವಾಲ್​ ಗರಂ. ** ಪಾಕ್​ ಮಾಜಿ ಪ್ರಧಾನಿ ನವಾಜ್​ ಷರೀಫ್​ಗೆ 10 ವರ್ಷ ಜೈಲು ಶಿಕ್ಷೆ. ** 2ನೇ ಟಿ-20: ಭಾರತದ ವಿರುದ್ಧ ಇಂಗ್ಲೆಂಡ್ ಗೆ ಗೆಲುವು. ** ಫಿಫಾ ವಿಶ್ವಕಪ್ ಟೂರ್ನಿ- ಉರುಗ್ವೆ ವಿರುದ್ಧ ಗೆದ್ದ ಫ್ರಾನ್ಸ್, ಬ್ರೆಜಿಲ್ ವಿರುದ್ಧ ಗೆದ್ದ ಬೆಲ್ಜಿಯಂ ಸೆಮಿಫೈನಲ್ ಗೆ

ಜೈ ಶೇಗುಣಸಿ ದಿನದ ಸುದ್ದಿ... ದಿ: 06-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 06-07-18 ** ರೈತರ 2ಲಕ್ಷದವರೆಗೆ ಎಲ್ಲಾ ಸಾಲಮನ್ನಾ- ಒಂದೇ ಹಂತದಲ್ಲಿ ಡಿ. 31,2017ರ ವರೆಗಿನ ಸುಸ್ತಿ ಸಾಲಮನ್ನಾ. ** 3 ವರ್ಷಗಳಲ್ಲಿ ತೆರಿಗೆ ಕಟ್ಟಿರುವ ರೈತರು, ಸರ್ಕಾರಿ ನೌಕರರ ಸಾಲಮನ್ನಾ ಇಲ್ಲ. ** ಸಕಾಲದಲ್ಲಿ ಸಾಲ ಪಾವತಿಸಿದ ರೈತರಿಗೆ 25ಸಾವಿರ ನಗದು ವಾಪಸ್. ** ಪೆಟ್ರೋಲ್ ಡೀಸೆಲ್ ಸೆಸ್ ಏರಿಕೆ- ಪೆಟ್ರೋಲ್ ಲೀ.1.14ರೂ, ಡೀಸೆಲ್ ಲೀ.1.12ರೂ ಏರಿಕೆ. ** ವಿದ್ಯುತ್ ಪ್ರತಿ ಯುನಿಟ್ ಗೆ 10ಪೈಸೆಯಿಂದ 20ಪೈಸೆಗೆ ಏರಿಕೆ. ** ಗರ್ಭಿಣಿಯರ ಭತ್ಯೆ 400ರೂ, ವೃದ್ಧಾಪ್ಯ ಮಾಸಾಶನ 400ರೂ. ಹೆಚ್ಚಳ. ** ರಾಜ್ಯದ ಎಲ್ಲ ತಾಲೂಕುಗಳಲ್ಲಿ ಇಂದಿರಾ ಕ್ಯಾಂಟೀನ್, ನಮ್ಮ ಮೆಟ್ರೋ 3ನೇ ಹಂತ ಅಭಿವೃದ್ಧಿ. ** ಇದು ಅಣ್ಣ ತಮ್ಮಂದಿರ ಬಜೆಟ್: ಬಜೆಟ್ ಬಗ್ಗೆ ಬಿಎಸ್ವೈ ಅಸಮಾಧಾನ. ** ವಿಜಯ್‌ ಮಲ್ಯ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಯುಕೆ ಹೈಕೋರ್ಟ್‌ ಅನುಮತಿ... ** ಇಂದು ರಾಜ್ಯಾದ್ಯಂತ ಕ್ರಾಂತಿಯೋಗಿ ಮಹಾದೇವರು ಚಲನಚಿತ್ರ ಬಿಡುಗಡೆ ...

ರೈತರ ಸಾಲ ಮನ್ನಾ ನಿಯಮಗಳೇನು? ಇಲ್ಲಿದೆ ಮಾಹಿತಿ

ಜೈ ಶೇಗುಣಸಿ ಸುದ್ದಿ... ಕುಟುಂಬದ ಒಬ್ಬರ ಬೆಳೆ ಸಾಲಮಾತ್ರ ಮನ್ನಾ * ರೈತ ಕುಟುಂಬದ 2 ಲಕ್ಷ ಸುಸ್ತಿ ಸಾಲಮನ್ನಾ ಮಾಡಲಾಗುತ್ತದೆ, ಕುಟುಂಬ ಎಂದರೆ ರೈತ ಅಥವಾ ಆತನ ಪತ್ನಿ ಅಥವಾ ಆತನ ಮಗನ ಹೆಸರಿನಲ್ಲಿ ಮಾಡಲಾದ ಕೃಷಿ ಸಾಲದಲ್ಲಿ 2 ಲಕ್ಷ ಸಾಲಮನ್ನಾ ಆಗಲಿದೆ. ಒಂದೇ ಕುಟುಂಬದಲ್ಲಿ ಎರಡು ಬೆಳೆಸಾಲ ಇದ್ದರೆ ಒಂದು ಸಾಲ (2 ಲಕ್ಷ) ಮಾತ್ರವೇ ಮನ್ನಾ ಆಗಲಿದೆ. ಸಾಲ ತೀರಿಸಿದ್ದವರಿಗೆ 25000 ಬಹುಮಾನ! * 01/04/2009ರ ನಂತರ ಪಡೆದ 30/12/2017 ರ ವೇಳೆಗೆ ಬಾಕಿ ಇರುವ ಬೆಳೆ ಸಾಲ ಮಾತ್ರ ಮನ್ನಾ ಆಗಲಿದೆ. ಅಕಸ್ಮಾತ್ ಅವಧಿಯ ಒಳಗೆ ಸಾಲ ತೀರಿಸಿದವರಿಗೆ 25000 ರೂಪಾಯಿ ಹಣ ವಾಪಾಸ್ಸು ಬರಲಿದೆ. ಸಹಕಾರ ಸಂಘದ ಸಾಲಮನ್ನಾ ಆಗಿರುವ ರೈತರಿಗೆ ಲಾಭವಿಲ್ಲ * ಕೃಷಿ ಸಾಲ ಅತವಾ ಕಿಸಾನ್ ಕ್ರೆಡಿಟ್ ಕಾರ್ಡ್‌ ಸಾಲ ಮರುಪಾವತಿಸಿದ ರೈತರಿಗೆ 25000 ರೂಪಾಯಿ ಬಹುಮಾನದ ರೀತಿಯಲ್ಲಿ ಸರ್ಕಾರ ನೀಡಲಿದೆ. ಮರುಪಾವತಿ ಮಾಡಿದ ಸಾಲವು 25000 ಕ್ಕಿಂತಲೂ ಕಡಿಮೆ ಇದ್ದರೆ ಅಷ್ಟೆ ಮೊತ್ತವನ್ನು ವಾಪಸ್ಸು ನೀಡಲಾಗುತ್ತದೆ. ತೋಟಗಾರಿಕೆ, ಪ್ಲಾಂಟೇಶನ್ ಸಾಲವೂ ಮನ್ನಾ * ಬೆಳೆ ಸಾಲ ಅಥವಾ ಕಿಸಾನ್ ಕ್ರೆಡಿಟ್ ಸಾಲ ಮತ್ತು 12 ರಿಂದ 18 ತಿಂಗಳ ಅವಧಿಯಲ್ಲಿ ತೀರಿಸಬಹುದಾದ ಸಾಲವನ್ನು ಬೆಳೆ ಸಾಲ ಎನ್ನಬಹುದು. ಪ್ಲಾಂಟೇಶನ್, ತೋಟಗಾರಿಕೆಗೆ ಪಡೆದ ಸಾಲಗಳನ್ನೂ ಒಳಗೊಂಡಿರುತ್ತದೆ. ಯಾವ ಬಗೆಯ ಸಾಲಮನ್ನಾ? * ಬೆಳೆಸಾಲ, ಮರು ವರ್ಗೀಕರಣ ಆದ ಬೆಳೆ ಸಾಲ (ರಿಸ್ಟ್ರಕ್ಚರ್ಡ್ ಲ...

ರೈತರಿಗೆ ಮೋದಿಯಿಂದ ಬಂಪರ್ ಗಿಫ್ಟ್: ಯಾವ ಬೆಳೆಗೆ ಎಷ್ಟು ಕನಿಷ್ಠ ಬೆಂಬಲ ಬೆಲೆ? ಇಲ್ಲಿದೆ ಪೂರ್ಣ ಮಾಹಿತಿ

Image
ಜೈ ಶೇಗುಣಸಿ ಸುದ್ದಿ ... ನವದೆಹಲಿ: ಭತ್ತ, ಕಬ್ಬು, ತೊಗರಿ ಸೇರಿದಂತೆ 17 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಇತ್ತೀಚೆಗೆ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ರೈತ ಪ್ರತಿನಿಧಿಗಳು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದು, ಭತ್ತ, ಕಬ್ಬು ಸೇರಿದಂತೆ ಮತ್ತಿತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಮನವಿ ಮಾಡಿದ್ದರು. ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಬೆಳೆಗಳ ಉತ್ಪಾದನಾ ವೆಚ್ಚಕ್ಕಿಂತ ಒಂದೂವರೆ ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರು. ಯಾವ ಬೆಳೆ, ಎಷ್ಟು ಏರಿಕೆ? ದೇಶದ ಪ್ರಮುಖ ಬೆಳೆಯಾಗಿರುವ ಭತ್ತದ ಬೆಲೆ ಪ್ರತಿ ಕ್ವಿಂಟಲ್‍ಗೆ 200 ರೂ. ಕನಿಷ್ಠ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸುವ ನಿರ್ಧಾರ ಕೈಗೊಂಡಿದೆ. ಹೀಗಾಗಿ ಸಾಮಾನ್ಯ ಭತ್ತದ ಸದ್ಯದ ಬೆಲೆ 1,550 ರೂ. ಇದ್ದು, ಅದನ್ನು 1,750 ರೂ.ಗೆ ಹೆಚ್ಚಳ ಮಾಡಿದೆ. ಅಲ್ಲದೇ ಎ ಗ್ರೇಡ್ ಭತ್ತದ ಬೆಲೆಯನ್ನು 1,590 ರೂ. ದಿಂದ 1,770 ರೂ., ಸೋಯಾಬೀನ್ ಬೆಲೆ 3,050 ರೂ. ದಿಂದ 3,399 ರೂ., ಶೇಂಗಾ ಬೆಲೆ 4,450 ರೂ. ದಿಂದ 4,890 ರೂ. ಹೆಚ್ಚಳ ಮಾಡಿದೆ. ರಾಗಿಯ ಬೆಲೆ ಸದ್ಯ ಪ್ರತಿ ಕ್ವಿಂಟಾಲ್‍ಗೆ 1,900 ರೂ. ಇದ್ದು, 2,897 ರೂ.ಗೆ ಏರಿಕೆ ಸೇರಿದಂತೆ, ನೈಗರ್ ಸೀಡ್ (ಗುರೆಳ್ಳು) ಬೆಲೆ 4,050 ರೂ. ನಿಂದ 5,877 ರೂ., ಹೈಬ್ರೀಡ್ ಜೋಳದ ಬೆಲೆ 1,700 ರೂ. ದಿಂದ 2,430...

ಜೈ ಶೇಗುಣಸಿ ದಿನದ ಸುದ್ದಿ.. ದಿ: 05-07-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 05-07-18 ** ಇಂದು ಸಿಎಂ ಕುಮಾರಸ್ವಾಮಿಯಿಂದ ಬಜೆಟ್ ಮಂಡನೆ: ಸಾಲಮನ್ನಾ ನಿರೀಕ್ಷೆಯಲ್ಲಿ ರಾಜ್ಯದ ರೈತ. **  ಮುಂಗಾರು ಬೆಳೆಗಳ ಬೆಂಬಲ ಬೆಲೆ ಹೆಚ್ಚಿಸಿ ರೈತರಿಗೆ ಬಂಪರ್‌ ಗಿಫ್ಟ್‌ ನೀಡಿದ ಕೇಂದ್ರ ಸರ್ಕಾರ. ** ಸಿಎಂ ಎಚ್​ಡಿಕೆ ಮೊದಲು ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬಿಎಸ್ವೈ. ** ವಿಧಾನಸಭೆ ಬಜೆಟ್‌ ಅಧಿವೇಶನದಲ್ಲಿ ಶಾಸಕರ, ಸಚಿವರ ಗೈರು: ಸ್ಪೀಕರ್‌ ರಮೇಶ್‌ ಕುಮಾರ್‌ ಗರಂ. ** ಕೆಪಿಸಿಸಿಗೆ ದಿನೇಶ್​ ಗುಂಡೂರಾವ್ ಅಧ್ಯಕ್ಷ, ಈಶ್ವರ ಖಂಡ್ರೆ ಕಾರ್ಯಾಧ್ಯಕ್ಷ. ** ಎಲ್ಲ ಶಾಸಕರು ತಿಂಗಳ ವೇತನವನ್ನು ಸಾಲಮನ್ನಾ ನಿಧಿಗೆ ನೀಡಿ: ಬಿ.ಸಿ.ಪಾಟೀಲ್​. ** ದೆಹಲಿಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನ ಇಲ್ಲ: ಸುಪ್ರೀಂ. ** ಲಿಂಗಾಯತ ಧರ್ಮ ವಿಚಾರಕ್ಕೆ ಬಂದರೆ ಹುಷಾರ್​: ವಿಧಾನಸಭೆಯಲ್ಲಿ ರಾಜಕುಮಾರ್ ಪಾಟೀಲ ಎಚ್ಚರಿಕೆ ** ಬುಲೆಟ್​ ಟ್ರೈನ್​ ಕನಸು ನನಸಾಗುವುದಿಲ್ಲ: ರಾಹುಲ್​ ಗಾಂಧಿ.

ರಾಹುಲ್ ಬ್ಯಾಟಿಂಗ್, ಕುಲದೀಪ್ ಬೌಲಿಂಗ್ ಅಬ್ಬರಕ್ಕೆ ಬೆದರಿದ ಇಂಗ್ಲೆಂಡ್..

Image
ಜೈ ಶೇಗುಣಸಿ ಸುದ್ದಿ...   ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್​ನಲ್ಲಿ ನಡೆದ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಭಾರತ ಎಂಟು ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಟಿ-20 ಸರಣಿಯಲ್ಲಿ ಭಾರತ 1-0 ಅಂತರದ ಮುನ್ನಡೆ ದಾಖಲಿಸಿದೆ. ಮೊದಲು ಬ್ಯಾಟಿಂಗ್​ ಮಾಡಿದ ಇಂಗ್ಲೆಂಡ್​ ತಂಡವನ್ನು ಭಾರತ ಕುಲದೀಪ್​ ಯಾದವ್​ (5 ವಿಕೆಟ್​) ಅವರ ಪ್ರಕರ ಬೌಲಿಂಗ್​ ದಾಳಿಯ ಮೂಲಕ 159 ರನ್‌ಗಳಿಗೆ ಕಟ್ಟಿ ಹಾಕಿತ್ತು. ಈ ಮೊತ್ತವನ್ನು ಬೆನ್ನು ಹತ್ತಿದ್ದ ಭಾರತ ತಂಡ ಆರಂಭದಲ್ಲಿ ಶಿಖರ್​ ಧವನ್​ ಅವರ ವಿಕೆಟ್​ ಕಳೆದುಕೊಳ್ಳುವ ಮೂಲಕ ಆಘಾತ ಅನುಭವಿಸಿತಾದರೂ, ಕೆಎಲ್ ರಾಹುಲ್ (101*) ಅವರ ಸಮಯೋಚಿತ ಆಟದ ನೆರವಿನಿಂದ ಯಶಸ್ವಿಯಾಗಿ ಗೆಲುವಿನ ಗುರಿ ಮುಟ್ಟಿತು. ಧವನ್​ ಹೊರತಾಗಿಯೂ ಕನ್ನಡಿಗ ರಾಹುಲ್ ಭಾರತಕ್ಕೆ ಉತ್ತಮ ಆರಂಭವೊದಗಿಸಿಕೊಟ್ಟರು. ಇವರಿಗೆ ರೋಹಿತ್ ಶರ್ಮಾ ಅವರಿಂದ ಉತ್ತಮ ಸಾಥ್​ ದೊರೆಯಿತು. ಹೀಗಿರುವಾಗಲೇ 32 ರನ್ ಗಳಿಸಿದ್ದ ರೋಹಿತ್ ಶರ್ಮಾ ವಿಕೆಟ್ ಒಪ್ಪಿಸಿದರು. ಹೀಗಿದ್ದರೂ, ಉತ್ತಮ ಆಟ ಮುಂದುವರಿಸಿದ ರಾಹುಲ್​ ಕೇವಲ 53 ಎಸೆತಗಳಲ್ಲೇ ಶತಕ ಸಾಧನೆ ಮಾಡುವ ಮೂಲಕ ಭಾರತವನ್ನು ಗೆಲ್ಲಿಸಿದರು. ಅಂತಿಮವಾಗಿ ಭಾರತ 18.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. ಇಂಗ್ಲೆಂಡ್​ ಪರ ಜೆಸಿ ಬಟ್ಲರ್​ 69 (46), ಜೆಜೆ ರಾಯ್​ 30 (20) ಹೊರತು ಪಡಿಸಿದರೆ ಯಾರಿಂದಲೂ ಉತ್ತಮ ಪ್ರ...

ಜೈ ಶೇಗುಣಸಿ ದಿನದ ಸುದ್ದಿ... ದಿ: 04-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 04-07-18 ** ಶಾಸಕರ ನಿಧಿಯಿಂದ ಉಳಿದ ಹಣವನ್ನು ಸಾಲಮನ್ನಾಗೆ ಬಳಕೆ: ಸರ್ಕಾರದ ಆದೇಶ. ** ಆಪರೇಷನ್ ಕಮಲ ಮಾಡಲ್ಲ: ಶೋಭಾ ಕರಂದ್ಲಾಜೆ. ** ಸಾಲಮನ್ನಾ ವಿಚಾರ: ಸದನದಲ್ಲಿ ಬಿಎಸ್ವೈ ಎಚ್ಡಿಕೆ ವಾಕ್ಸಮರ. ** ರಾಜ್ಯದ ಮಾನಸ ಸರೋವರ ಯಾತ್ರಿಗಳ ರಕ್ಷಣೆಗೆ ಸರ್ಕಾರ ಸಿದ್ಧ: ಆರ್‌ ವಿ ದೇಶಪಾಂಡೆ. ** ನಾನು ಶಹೆನ್‏ಶಾಹ್ ಅಥವಾ ಚಕ್ರವರ್ತಿ ಅಲ್ಲ. ಜನರೊಂದಿಗೆ ಬೆರೆಯುವುದರಿಂದ ಮತ್ತು ಅವರ ಶುಭಹಾರೈಕೆಗಳಿಂದ ನನಗೆ ಮತ್ತಷ್ಟು ಶಕ್ತಿ ಬರಲಿದೆ: ಪ್ರಧಾನಿ ನರೇಂದ್ರ ಮೋದಿ. ** ನಿರುದ್ಯೋಗ ನಿವಾರಣೆಗೆ ಸಿಎಂಗೆ ಪತ್ರ ಬರೆದು ದಾವಣಗೆರೆಯಲ್ಲಿ ಯುವಕ ಆತ್ಮಹತ್ಯೆ. ** ಕ್ರಿಕೆಟ್- 76 ಎಸೆತದಲ್ಲಿ 172 ರನ್​: ಟಿ-20ಯಲ್ಲಿ ನೂತನ ವಿಶ್ವದಾಖಲೆ ಬರೆದ ಆರೋನ್​ ಫಿಂಚ್! **ಆಂಗ್ಲರ ವಿರುದ್ಧ ಮೊದಲ ಟಿ-20 ಪಂದ್ಯದಲ್ಲಿ ಭಾರತಕ್ಕೆ ಜಯ.

ಇಂದು ವಿಧಾನಸಭೆಯಲ್ಲಿ ಮತ್ತೆ ಗುಡುಗಿ ಮೈತ್ರಿ ಸರ್ಕಾರದ ಚಳಿ ಬಿಡಿಸಿದ ಬಿ.ಎಸ್.ಯಡಿಯೂರಪ್ಪ..

Image
ಜೈ ಶೇಗುಣಸಿ ಸುದ್ದಿ... ಸದ್ಯ ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನ ನಡೆಯುತ್ತಿದೆ. ನೆನ್ನೆ ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಸುದೀರ್ಘವಾದ ಭಾಷಣವನ್ನು ಮಾಡಿದ್ದರು. ಇಂದು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಕುರಿತು ಸದನ ನಡೆಯುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರಕಾರದ ಅತ್ಯಂತ ಮಹತ್ವದ ಬಜೆಟ್ ಅಧಿವೇಶನ ಇದಾಗಿದ್ದು ರಾಜ್ಯದ ಜನರ ಗಮನ ಸೆಳೆದಿದೆ. ಸಾಲಮನ್ನಾ ಸೇರಿದಂತೆ ಹಲವಾರು ಮಹತ್ವದ ನಿರ್ಧಾರಗಳು ಈ ಅಧಿವೇಶನದಲ್ಲಿ ಹೊರಬೀಳುವ ನಿರೀಕ್ಷಿಯಿದೆ‌. ಇಂದು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದಲ್ಲಿ ಹಲವಾರು ವಿಷಯಗಳ ಕುರಿತು ಬಿಸಿ ಬಿಸಿ ಚರ್ಚೆ ನಡೆಯಿತು. ವಿಧಾನಸಭೆಯ ವಿಪಕ್ಷ ನಾಯಕ ಬಿ ಎಸ್ ಯಡಿಯೂರಪ್ಪನವರು ಅಕ್ಷರಶಃ ಮೈತ್ರಿ ಸರ್ಕಾರವನ್ನು ಇಂಚಿಂಚೂ ಕಾಡಿದರು. ಕಟು ಶಬ್ದಗಳಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಸರ್ಕಾರದ ವಿರುದ್ಧ ಹರಿಹಾಯ್ದರು. ತಾವು ಪ್ರಣಾಳಿಕೆಯಲ್ಲಿ ಕೊಟ್ಟಂತಹ ಮಾತುಗಳನ್ನು, ಭರವಸೆಗಳನ್ನು ಮತ್ತೊಮ್ಮೆ ನೆನಪಿಸಿದರು. ಈ ವಾರ ಮಂಡನೆಯಾಗಲಿರುವ ಬಜೆಟ್ ನಲ್ಲಿ ಭರವಸೆಗಳನ್ನು ಈಡೇರಿಸುವ ಕುರಿತು ಮಾತನಾಡದಿದ್ದರೆ ರಾಜ್ಯಾದ್ಯಂತ ಸಮಾವೇಶಗಳನ್ನು ಹಮ್ಮಿಕೊಳ್ಳುವುದಾಗಿ ಘೋಷಿಸಿದರು. ತಾವು ಕೊಟ್ಟ ಎಲ್ಲಾ ಭರವಸೆಗಳನ್ನು ಈಡೇರಿಸಿದರೆ ನಾನೇ ಮುಂದೆ ನಿಂತು ನಿಮಗೆ ಜೈಕಾರ ಹೇಳುತ್ತೇನೆ. ಅದರ ಬದಲ...

ಗೋ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು....!

Image
ಜೈ ಶೇಗುಣಸಿ ಸುದ್ದಿ... ಗೋವಿನ ಮೂತ್ರದಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂದು ಗುಜರಾತಿನ ಸಂಶೋಧಕರು ಹೇಳಿದ್ದಾರೆ. ಜುನಾಘಡ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ವಿಜ್ಞಾನಿಗಳು ಒಂದು ವರ್ಷದಿಂದ ಪ್ರಯೋಗ ನಡೆಸಿ ಈಗ ಯಶಸ್ವಿಯಾಗಿದ್ದಾರೆ. ಸಂಶೋಧನೆಯ ಮೊದಲ ಪ್ರಯತ್ನದಲ್ಲಿಯೇ ಗೋವಿನ ಮೂತ್ರವನ್ನು ಬಳಸಿ ಕ್ಯಾನ್ಸರ್ ಜೀವಕೋಶಗಳನ್ನು ಕೊಲ್ಲಬಹುದು ಎಂಬ ಪ್ರಯತ್ನದಲ್ಲಿ ಯಶಸ್ಸು ಕಂಡುಕೊಂಡಿದ್ದಾರೆ. ಗೋ ಮೂತ್ರದಿಂದ ಬಾಯಿ, ಗರ್ಭಕೋಶ, ಶ್ವಾಸಕೋಶ, ಮೂತ್ರಪಿಂಡ, ಚರ್ಮ, ಸ್ತನ ಕ್ಯಾನ್ಸರ್ ಗಳನ್ನು ಕೂಡ ಗುಣಪಡಿಸಬಹುದೆಂದು ತಿಳಿಸಿದ್ದಾರೆ. ಸಹಾಯಕ ಪ್ರಾಧ್ಯಾಪಕರಾದ ಶಾರದಾ ಭಟ್, ರುಕಮ್ ಸಿನ್ಹ ತೋಮರ್, ಹಾಗೂ ಸಂಶೋಧನಾ ವಿದ್ಯಾರ್ಥಿ ಕವಿತಾ ಜೋಶಿ ಯವರನ್ನು ಒಳಗೊಡ ಈ ಸಂಶೋಧನಾ ತಂಡ, ಒಂದು ವರ್ಷದ ಪ್ರಯೋಗದ ಫಲವಾಗಿ ಕ್ಯಾನ್ಸರ್ ನ್ನು ಗೋ ಮೂತ್ರದಿಂದ ಗುಣಪಡಿಸಬಹುದು ಎಂದು ಸಾಬೀತುಪಡಿಸಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಶಾರದಾ ಭಟ್ ಬಾಟಲಿಯಲ್ಲಿ ಸಂಗ್ರಹಿಸಲಾದ ಕ್ಯಾನ್ಸರ್ ಕೋಶಗಳ ಮೇಲೆ ನಾವು ನೇರ ಪ್ರಯೋಗ ಮಾಡಿದ್ದೇವೆ. ನಿರ್ಧಿಷ್ಟ ಸಂಖ್ಯೆಯ ಕ್ಯಾನ್ಸರ್ ಕೋಶಗಳನ್ನು ಕೊಲ್ಲಲು ಬೇಕಾದ ಗೋ ಮೂತ್ರದ ಪ್ರಮಾಣವನ್ನು ಎಷ್ಟಿರಬೇಕೆಂಬುದನ್ನು ಅಪಾಯಕಾರಿಯಾದ ಸಂಶೋಧನೆಯ ಮೂಲಕ ಕಂಡುಕೊಂಡಿದ್ದೇವೆ ಎಂದು ಹೇಳಿದರು. ಮುಂದಿನ ಹಂತದಲ್ಲಿ ಇದನ್ನು ಇಲಿಗಳ ಮೇಲೆ ಪ್ರಯೋಗ ಮಾಡಲಾಗುತ್ತದೆ. ಅದು ಯಶಸ್ಸು ಕಂಡನಂತರ ವಿವಿಧ ರೀತಿ...

ಜೈ ಶೇಗುಣಸಿ ದಿನದ ಸುದ್ದಿ... ದಿ: 03-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 03-07-18 ** ಸಾಲ ಮನ್ನಾ ಬಗ್ಗೆ ಜುಲೈ 5ರವರೆಗೆ ಕಾಯಿರಿ- ಸಿಎಂ. ** ಕಾವೇರಿ ಪ್ರಾಧಿಕಾರದ ಮೊದಲ ಸಭೆಯಲ್ಲಿ ಕರ್ನಾಟಕಕ್ಕೆ ಆಘಾತ. ** ರೈತಮೋರ್ಚಾ ನೀಡಿದ ವರದಿ ಮುಂದಿಟ್ಟು ಹೋರಾಟಕ್ಕೆ ಬಿಜೆಪಿ ನಿರ್ಧಾರ. ** ಹಿಮಾಲಯ ಪರ್ವತ ಏರಿದ ರಾಜ್ಯದ ವಿಕ್ರಂ ಸಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅಭಿನಂದನೆ. ** ಎಂ.ಬಿ. ಪಾಟೀಲ್​ಗೂ ಸಚಿವ ಸ್ಥಾನ ನೀಡಬೇಕು: ಸಚಿವ ಶಿವಾನಂದ ಪಾಟೀಲ್ ** ಆರು ತಿಂಗಳಲ್ಲಿ ಬಿಎಸ್‍ವೈ ಮತ್ತೆ ಸಿಎಂ : ಉಮೇಶ್ ಕತ್ತಿ. ** ಸಚಿವ ಜಮೀರ್​ ಬೇಡಿಕೆಯಂತೆ ಫಾರ್ಚ್ಯೂನರ್​ ಕಾರು ಕೊಟ್ಟ ಸರ್ಕಾರ. ** ಐಸಿಸಿ 'ಹಾಲ್ ಆಫ್ ಫೇಮ್' ಗೌರವಕ್ಕೆ ಪಾತ್ರರಾದ ರಾಹುಲ್ ದ್ರಾವಿಡ್.

ಜೈ ಶೇಗುಣಸಿ ದಿನದ ಸುದ್ದಿ... ದಿ: 02-07-18

ಜೈ ಶೇಗುಣಸಿ ದಿನದ ಸುದ್ದಿ... ದಿ: 02-07-18 ** ಬಜೆಟ್ ಮಂಡನೆ ಬಳಿಕ ಸಂಪುಟ ವಿಸ್ತರಣೆ ಪಕ್ಕಾ. ರೈತರ ಕೃಷಿ ಸಾಲ ಮನ್ನಾಗೆ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಸಭೆಯಲ್ಲಿ ಹಸಿರು ನಿಶಾನೆ. ** ಈ ಸಲದ‌ ಬಜೆಟ್‌ನಲ್ಲಿ ರೈತರ ಸಾಲ ಮನ್ನಾ ಗ್ಯಾರೆಂಟಿ: ಸಚಿವ ಎಚ್.ಡಿ.ರೇವಣ್ಣ. ** ನಿಗಮ ಮಂಡಳಿ ಹಂಚಿಕೆ ಬಗ್ಗೆ ವೇಣುಗೋಪಾಲ್ ಜತೆ ಪರಂ, ಸಿದ್ದು ಚರ್ಚೆ. ** ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಲಘು ಭೂಕಂಪ. ** ಕಾಂಗ್ರೆಸ್‌ನ 27 ಶಾಸಕರು ಬಿಜೆಪಿ ಸಂಪರ್ಕದಲ್ಲಿಲ್ಲ, ಬಿಜೆಪಿಯವರೇ ಕಾಂಗ್ರೆಸ್‌ ಸಂಪರ್ಕದಲ್ಲಿ ಇದ್ದಾರೆ-ರಮೇಶ ಜಾರಕಿಹೊಳಿ. ** ನಮ್ಮ ಸರಕಾರ ಜಾತಿ ರಾಜಕಾರಣ ಮಾಡುವುದಿಲ್ಲ- ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ. ** ಹಾಲು ಮತ್ತು ಮೆರ್ಸಿಡಿಸ್‌ ಒಂದೇ ದರಕ್ಕೆ ಸಿಗುವುದೇ: ಜಿಎಸ್‌ಟಿ ಟೀಕಾಕಾರರಿಗೆ ಮೋದಿ ಪ್ರಶ್ನೆ. ** 2025ರೊಳಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ನಷ್ಟಾಗಲಿದೆ- ರಾಷ್ಟ್ರಪತಿ ಕೋವಿಂದ್ ** ಮಕ್ಕಳ ಕಳ್ಳರೆಂದು ಭಾವಿಸಿ 5ಜನರನ್ನು ಕೊಲೆಗೈದ ಮಹಾರಾಷ್ಟ್ರದ ಗ್ರಾಮಸ್ಥರು.

ಏಕದಿನ, ಟಿ20 ವಿಶ್ವಕಪ್ ಹಾಗೂ ಐಪಿಎಲ್, ಮೂರು ಪ್ರಶಸ್ತಿ ಗೆದ್ದ ಭಾರತೀಯರು ಯಾರು?

Image
ಜೈ ಶೇಗುಣಸಿ ಸುದ್ದಿ.. ಏಕದಿನ ವಿಶ್ವಕಪ್, ಟಿ20 ವಿಶ್ವಕಪ್ ಹಾಗೂ ಐಪಿಎಲ್ ಟೂರ್ನಿ ಈ ಮೂರು ಕ್ರಿಕೆಟ್ ಸರಣಿಗಳು ಅತ್ಯಂತ ಮಹತ್ವ ಹಾಗೂ ವಿಶೇಷ. ಪ್ರತಿ ತಂಡಕ್ಕೂ, ಪ್ರತಿ ಕ್ರಿಕೆಟ್ ಆಟಗಾರ ವಿಶ್ವಕಪ್ ಹಾಗೂ ಐಪಿಎಲ್ ಗೆಲ್ಲಲು ಶತಾಯಗತಾಯ ಪ್ರಯತ್ನಿಸುತ್ತಾರೆ. ಆದರೆ ಎಲ್ಲರಿಗೆ ಅದೃಷ್ಠ ಒಲಿಯುವುದಿಲ್ಲ. ಆದರೆ ಈ ಮೂರು ಪ್ರಶಸ್ತಿ ಗೆಲ್ಲುವಲ್ಲಿ ಕೆಲ ಭಾರತೀಯ ಕ್ರಿಕೆಟಿಗರು ಯಶಸ್ವಿಯಾಗಿದ್ದಾರೆ. ಎಂ ಎಸ್ ಧೋನಿ ವಿಶ್ವ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಹಾಗೂ ಕ್ರಿಕೆಟಿಗ ಎಂ ಎಸ್ ಧೋನಿ. 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದು ದಾಖಲೆ ಬರೆದ ಧೋನಿ, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದರು. ಇನ್ನು ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಮುನ್ನಡೆಸಿದ ಧೋನಿ 2010,2011 ಹಾಗೂ 2018ರಲ್ಲಿ ಮೂರು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದಾರೆ. ಯುವರಾಜ್ ಸಿಂಗ್ ಟೀಂ ಇಂಡಿಯಾದ ಐತಿಹಾಸಿಕ ಗೆಲುವಿನಲ್ಲಿ ಯುವರಾಜ್ ಸಿಂಗ್ ಪಾತ್ರ ಪ್ರಮುಖವಾಗಿದೆ. 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅಬ್ಬರಿಸಿದ ಯುವಿ, ಚೊಚ್ಚಲ ಟಿ20 ಟ್ರೋಫಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇನ್ನು 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಯುವರಾಜ್ ಸಿಂಗ್, ಏಕದಿನ ವಿಶ್ವಕಪ್ ಗೆದ್ದುು ಸಂಭ್ರಮಿಸಿದರು. 2016ರ ಐಪಿಎಲ್ ಟೂರ್ನಿಯಲ್ಲಿ ಸನ್ ರೈಸರ್ಸ್ ಹೈದ...

ಜೈ ಶೇಗುಣಸಿ ದಿನದ ಸುದ್ದಿ.. ದಿ: 01-07-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 01-07-18 ** ಇಂದು ಸಮನ್ವಯ ಸಮಿತಿ ಸಭೆ: ಸಾಲಮನ್ನಾ, ಬಜೆಟ್ ಕುರಿತು ಚರ್ಚೆ. ** ** ಕಾವೇರಿ ನೀರು ಹಂಚಿಕೆ: ಅಂತಿಮ ಹಂತದ ಹೋರಾಟಕ್ಕೆ ಸರ್ವಪಕ್ಷ ಸಭೆ ನಿರ್ಣಯ ** ಅನಂತಕುಮಾರ ಹೆಗಡೆ ನೀಚ: ಆನಂದ್ ಆಸ್ನೋಟಿಕರ್ ವಾಗ್ದಾಳಿ. ** ನಾಡಿನ ನೆಲ, ಜಲ ಮತ್ತು ಭಾಷೆ ವಿಚಾರದಲ್ಲಿ ರಾಜಕೀಯ ಮಾಡುವುದಿಲ್ಲ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ. ** ಉತ್ತರ ಕರ್ನಾಟಕದವರು ಕೆಪಿಸಿಸಿ ಅಧ್ಯಕ್ಷರಾಗಲಿ: ರಮೇಶ ಜಾರಕಿಹೊಳಿ. ** ಸರ್ಕಾರದ ಮುಖ್ಯಕಾರ್ಯದರ್ಶಿಯಾಗಿ ಐಎಎಸ್​ ಅಧಿಕಾರಿ ಟಿ.ಎಂ ವಿಜಯ ಭಾಸ್ಕರ್ ನೇಮಕ. ** ಪ್ರಯಾಣಿಕನಿಗೆ ಥಳಿಸಿದ ರಾಯಬಾಗ ಕೆಎಸ್ಸಾರ್ಟಿಸಿ ಅಧಿಕಾರಿ ಅಮಾನತು. ** ದುಬೈ: ಇರಾನ್ ವಿರುದ್ದ ಗೆದ್ದ ಭಾರತ, ಕಬಡ್ಡಿ ಮಾಸ್ಟರ್ಸ-18 ಚಾಂಪಿಯನ್. ** ಫಿಫಾ ವಿಶ್ವಕಪ್ ಟೂರ್ನಿ- ಪ್ರಾನ್ಸ್ ವಿರುದ್ಧ ಸೋತ ಅರ್ಜೆಂಟೀನಾ ಟೂರ್ನಿಯಿಂದ ಔಟ್.