ಕಬ್ಬು ಪೂರೈಸಿದರೂ ಬಿಡುಗಡೆಯಾಗದ ಹಣ: ಸಕ್ಕರೆ ಕಾರ್ಖಾನೆ ಎದುರೇ ಶೇಗುಣಸಿ ರೈತ ಆತ್ಮಹತ್ಯೆ

ಜೈ ಶೇಗುಣಸಿ ಸುದ್ದಿ...



ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಬೇಸತ್ತ ರೈತರೊಬ್ಬರು ಕಾರ್ಖಾನೆ ಎದುರೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ಈ ಘಟನೆ ನಡೆದಿದೆ. ಬೆಳಗಾವಿಯ ಶೇಗುಣಸಿ ಗ್ರಾಮದ ರೈತ ಹನುಮಂತಪ್ಪ ಕಾಡಪ್ಪನವರು ಆತ್ಮಹತ್ಯೆ ಮಾಡಿಕೊಂಡವರು.

ಸಾವರಿನ್​ ಶುಗರ್ಸ್​ ಕಂಪನಿಗೆ 200 ಟನ್​ ಕಬ್ಬು ಪೂರೈಸಿದ್ದ ಹುನುಮಂತಪ್ಪ ಅವರಿಗೆ ಈ ವರಗೆ ಹಣ ಬಿಡುಗಡೆಯಾಗಿರಲಿಲ್ಲ. ಈ ನಡುವೆ ರೈತ ಹನುಮಂತಪ್ಪ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಒಂದೆಡೆ ಕಬ್ಬಿನ ಹಣ ಸಿಗದೆ, ಸಾಲದ ಸಮಸ್ಯೆ ತಾಳಲಾರದೆ ಅವರು ಕಾರ್ಖಾನೆಯ ಎದುರೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಾವರಿನ್​ ಶುಗರ್ಸ್​ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಶಿವಕುಮಾರ್​ ಮಲಘಾಣ ಎಂಬುವವರ ಮಾಲಿಕತ್ವದ್ದಾಗಿದೆ.
ತೇರದಾಳ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18