ಶೇಗುಣಸಿಯಲ್ಲಿ ಸಾವಯವ ಲೋಕ
ಜೈ ಶೇಗುಣಸಿ... ಸಣ್ಣ ಪ್ರಮಾಣದಲ್ಲಿ ಬೇಸಾಯ ಮಾಡುವವರು ಸಾವಯವ ಕೃಷಿಯಲ್ಲಿ ಯಶಸ್ವಿಯಾಗಬಹುದು. ಆದರೆ ತುಂಬ ದೊಡ್ಡ ಪ್ರಮಾಣದಲ್ಲಿ ಸಂಪೂರ್ಣವಾಗಿ ಸಾವಯವಮಯವಾಗಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ ನೀವು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿರುವ ಕಲ್ಮೇಶ್ವರ ಫಾರ್ಮ ಹೌಸ್ಗೆ ಭೇಟಿ ನೀಡಬೇಕು. ಅಲ್ಲಿ ಯಲಡಗಿ ಮತ್ತು ಭದ್ರಪ್ಪಗೋಳ ಕುಟುಂಬದ ಸದಸ್ಯರಾದ ಕಲ್ಮೇಶ ಯಲಡಗಿ ನೇತೃತ್ವದಲ್ಲಿ ನಡೆಯುವ ಕೃಷಿ ಚಟುವಟಿಕೆಗಳನ್ನು ನೋಡಬೇಕು. ಉತ್ತರ ತನ್ನಿಂತಾನೇ ಸಿಗುತ್ತದೆ. ಅವರು ಕೃಷ್ಣಾ ನದಿ ತೀರದಲ್ಲಿರುವ 32 ಎಕರೆ ಎರೆಭೂಮಿಯಲ್ಲಿ ಕಲ್ಮೇಶ್ವರ ಫಾರ್ಮ ಹೌಸ್ನ ಆಶ್ರಯದಲ್ಲಿ ಭರ್ತಿ ಕೇವಲ ಸಾವಯವ ಗೊಬ್ಬರ ಮತ್ತು ಸಾವಯವ ಔಷಧವನ್ನು ಮಾತ್ರ ಬಳಸಿ ಕೃಷಿ ಮಾಡುತ್ತಾರೆ. ಸ್ವತಃ ಎರೆಗೊಬ್ಬರ, ದಶಪರ್ಣಿ, ಪಂಚಗವ್ಯ ಮತ್ತು ಔಷಧಗಳಾದ ಹಸಿಮೆಣಸಿಕಾಯಿ ಕಷಾಯ, ಎರೆಜಲ, ಜೀವ ಸಾರ, ಹೀಗೆ ಸಾವಯವ ಗೊಬ್ಬರ, ಔಷಧ ತಯಾರಿಸಿ ತಮ್ಮ ಸ್ವಂತ ಭೂಮಿಗೆ ಉಪಯೋಗಿಸಿ ಮಿಕ್ಕಿದ್ದನ್ನು ಬೇರೆ ರೈತರಿಗೆ ಮಾರಾಟ ಮಾಡುತ್ತಾರೆ. ಇದು ಸಂಸ್ಥೆಗೆ ಲಾಭವನ್ನೂ ತಂದುಕೊಡುತ್ತಿದೆ. ಒಟ್ಟು 25 ಬರಡು ದನಗಳು ಹಾಗೂ ಗೀರ್, ಜವಾರಿ, ಖಿಲಾರಿಯಂಥ ವಿಶೇಷ ತಳಿಯ ಆಕಳುಗಳನ್ನು ಸಾಕಿ, ಅವುಗಳ ಸೆಗಣಿಯಿಂದ ಕಾಂಪೋಸ್ಟ್ ಗೊಬ್ಬರವನ್ನು ತಯಾರಿಸುವುದು ಇಲ್ಲಿನ ವಿಶೇಷ. ರೈತ ಕಲ್ಮೇಶ್ ಅವರು ಸಂಪೂರ್ಣ ಜೀವಸತ್ವ ನೀಡುವ ಈ ಕಾಂಪೋಸ್ಟ್ ಗೊಬ್ಬರವನ್ನು ಮ...