Posts

ಕೊಡಗಿನ 575ಸಂತ್ರಸ್ತ ಕುಟುಂಬಕ್ಕೆ ನೆರವಾಗಲಿದೆ ಶೇಗುಣಸಿ ಗ್ರಾಮಸ್ಥರ ಕೊಡುಗೆ..

Image
ಜೈ ಶೇಗುಣಸಿ ಸುದ್ದಿ.. ಶೇಗುಣಸಿ ಗ್ರಾಮದ ಗ್ರಾಮಸ್ಥರು ಕೊಡಗಿನ ನೆರೆ ಹಾವಳಿಗೆ ತತ್ತರಿಸಿದ ಸಂತ್ರಸ್ತರಿಗಾಗಿ ಅಗತ್ಯ ವಸ್ತು ಮತ್ತು ಆಹಾರ ಧಾನ್ಯ ಸಂಗ್ರಹಣೆ ಕಾರ್ಯಕ್ಕೆ ತೆರೆ ಬಿದ್ದಿದ್ದು ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾಗಿದೆ. ಕೊಡಗಿನ 575ಕುಟುಂಬಗಳಿಗೆ ನೆರವಾಗುವಂತೆ, ಆಹಾರ ಧಾನ್ಯವನ್ನು ಹಂಚಲು ಸರಳವಾಗುವಂತೆ 575ಆಹಾರ ಧಾನ್ಯ ಮತ್ತು ಅಗತ್ಯ ವಸ್ತುಗಳ ಕಿಟ್ ಗಳು ಸಿದ್ದಗೊಂಡಿದೆ. ಪ್ರತಿ ಆಹಾರ ಧಾನ್ಯದ ಕಿಟ್ ನಲ್ಲಿ 2ಕೆ.ಜಿ ಬೇಳೆ, 2ಕೆ.ಜಿ ಗೋಧಿ ಹಿಟ್ಟು, 2ಕೆ.ಜಿ ಸಕ್ಕರೆ, 10ಕೆ.ಜಿ ಅಕ್ಕಿ, 1ಸೀರೆ, 1ಹಲ್ಲುಜ್ಜುವ ಬ್ರಶ್ ಮತ್ತು ಪೇಸ್ಟ್ ಇವೆ. ಸಂಗ್ರಹಿಸಿದ ಒಟ್ಟು ಆಹಾರ ಧಾನ್ಯದ ತೂಕ 90ಕ್ವಿಂಟಲ್ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಪ್ಯಾಕ್ ಮಾಡುವ ಸಂದರ್ಭದಲ್ಲಿ ಕಲ್ಮೇಶ ಯಲಡಗಿ, ಅಶೋಕ ಅಮ್ಮಣಗಿ, ಮಹಾಂತೇಶ ಶಾನವಾಡ, ವಿವೇಕ ನಾರಗೊಂಡ, ಕುಮಾರ ಹೊರಟ್ಟಿ, ಶ್ರಿಶೈಲ ಮಠಪತಿ ಸೇರಿದಂತೆ ಅನೇಕರು ಇದ್ದರು.

ಜೈ ಶೇಗುಣಸಿ ದಿನದ ಸುದ್ದಿ... ದಿ: 31-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 31-08-18 ** ಸರ್ಕಾರ 100ದಿನ ಪೂರೈಸಿದ್ದಕ್ಕೆ ಜನತೆಗೆ ಕೃತಜ್ಞತೆ ಸಲ್ಲಿಸಿದ ಹೆಚ್ಡಿಕೆ ** ಇಂದು ರಾಜ್ಯದ 22ಜಿಲ್ಲೆಗಳ 105ಸ್ಥಳಿಯ ಸಂಸ್ಥೆ ಚುನಾವಣೆ ** ಗೃಹ ಸಚಿವರನ್ನು ಭೇಟಿ ಮಾಡಿ ನೆರೆ ನೆರವು ಕೋರಿದ ಸಿಎಂ ಎಚ್​ಡಿಕೆ ** 100 ದಿನದಲ್ಲಿ 100 ಸಮಸ್ಯೆ ತಂದ ದೊಂಬರಾಟದ ಸರ್ಕಾರ: ಕೋಟ ಶ್ರೀನಿವಾಸ ಪೂಜಾರಿ ** ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಹುಲ್​ಗೆ ದೂರು ನೀಡಿದ ಕುಮಾರಸ್ವಾಮಿ ** ಸಿಎಂ ಎಚ್ ಡಿಕೆಗೆ ಸರ್ಕಾರ ಉಳಿಸಿಕೊಳ್ಳುವುದೇ ದೊಡ್ಡ ಚಿಂತೆ: ಬಿಜೆಪಿ ** ದಸರಾ ಉದ್ಘಾಟನೆಯ ಅವಕಾಶ ಲಭಿಸಿರುವುದು ನನ್ನ ಸೌಭಾಗ್ಯ: ಡಾ ಸುಧಾಮೂರ್ತಿ ** ಡಿಎಂಕೆಗೆ ವಾಪಸ್‌ ಕರೆಸಿಕೊಂಡರೆ ಸ್ಟಾಲಿನ್‌ರನ್ನು ಅಧ್ಯಕ್ಷರನ್ನಾಗಿ ಒಪ್ಪಿಕೊಳ್ಳುತ್ತೇನೆ: ಅಳಗಿರಿ ** ನೋಟು ನಿಷೇಧದಿಂದಾಗಿ ಆರ್ಥಿಕತೆ ಸುಗಮ, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ: ಅರುಣ್ ಜೇಟ್ಲಿ ** ರಾಹುಲ ಗಾಂಧಿಯಿಂದ ಕೈಲಾಸ ಮಾನಸ ಸರೋವರ ಯಾತ್ರೆ ** ಲಷ್ಕರ್​ ಎ ತೊಯ್ಬಾದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಕಾಶ್ಮೀರಿ ಭದ್ರತಾ ಪಡೆ ** ಏಷ್ಯನ್ ಕ್ರೀಡಾಕೂಟ: ಭಾರತಕ್ಕೆ 2ಚಿನ್ನ, 1ಬೆಳ್ಳಿ; ಒಟ್ಟು 59ಪದಕ ಗೆದ್ದ ಭಾರತ. ** ಕ್ರಿಕೆಟ್: ಆರ್ ಸಿಬಿ ಮುಖ್ಯ ಕೋಚ್ ಆಗಿ ಗ್ಯಾರಿ ಕರ್ಸ್ಟನ್ ನೇಮಕ

ಜೈ ಶೇಗುಣಸಿ ದಿನದ ಸುದ್ದಿ... ದಿ: 30-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 30-08-18 ** ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಇಂದಿಗೆ 100ದಿನ; ಸಮಯ ವ್ಯರ್ಥ ಮಾಡದೆ ರಾಜ್ಯದ ಅಭಿವೃದ್ಧಿ: ಸಿಎಂ ** ಹೈಕಮಾಂಡ್ ಸೂಚನೆ ಮೇರೆಗೆ ಕೈ ಸಚಿವರಿಗೆ 6ತಿಂಗಳಿಗೊಮ್ಮೆ ಮೌಲ್ಯ ಮಾಪನ: ಡಿಸಿಎಂ ಪರಮೇಶ್ವರ್ ** ಕಾಂಗ್ರೆಸ್ ನಾಯಕರು ಸಂಪರ್ಕದಲ್ಲಿರುವುದು ನಿಜ: ಬಿಎಸ್ವೈ ** ** ಸರ್ಕಾರದಿಂದ ಫೋನ್ ಕದ್ದಾಲಿಕೆ ಎಂಬ ಬಿಎಸ್ವೈ ಆರೋಪ- ಮೋದಿ ಭೇಟಿಯಾಗಿ ತನಿಖೆ ನಡೆಸಲಿ: ಎಚ್ಡಿಕೆ ** ನಾನೋ ಶ್ರೀರಾಮುಲುನೋ ಯಾರು ಹೆಚ್ಚು ಕೆಲಸ ಮಾಡ್ತಾರೆ ನೋಡೋಣ: ಸಿದ್ದರಾಮಯ್ಯ ** ನನಗಿಂತ ಸಚಿವೆ ಜಯಮಾಲಾ ಹೆಚ್ಚು ಗ್ಲಾಮರಸ್: ಸಚಿವ ಪ್ರಮೋದ್ ಮಧ್ವರಾಜ್ ** ಮಾಜಿ ಸಚಿವ ಬಾಬುರಾವ್ ಚಿಂಚನೂರ ಬಿಜೆಪಿ ಸೇರ್ಪಡೆ. ** ಕೊಡಗು ನಿರಾಶ್ರಿತರಿಗೆ ನಟಿ ರಶ್ಮಿತಾ ಮಂದಣ್ಣ ನೆರವು ** ಭೀಕರ ಅಪಘಾತದಲ್ಲಿ ನಟ ನಂದಮೂರಿ ಹರಿಕೃಷ್ಣ ಸಾವು ** ರಫೆಲ್​ ರಾಬರಿಯನ್ನು ಜಂಟಿ ಸಂಸದೀಯ ಸಮಿತಿಗೆ ಒಪ್ಪಿಸಿ, 24 ಗಂಟೆಗಳಲ್ಲಿ ನನಗೆ ಉತ್ತರಿಸಿ: ರಾಹುಲ್​ ಸವಾಲು ** ಏಷ್ಯನ್ ಕ್ರೀಡಾಕೂಟ: ಟ್ರಿಪಲ್‌ ಜಂಪ್‌ನಲ್ಲಿ ಭಾರತಕ್ಕೆ ಒಲಿದ 10 ನೇ ಚಿನ್ನದ ಪದಕ; 54ಪದಕ ಭಾರತದ ಕೊರಳಿಗೆ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 29-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 29-08-18 ** ಸಂತ್ರಸ್ತರಿಗೆ ಮಿಡಿದ ಶೇಗುಣಸಿ ಗ್ರಾಮ: ಕೊಡಗಿಗೆ 50ಕ್ವಿ. ಅಕ್ಕಿ, 15ಕ್ವಿ. ಸಕ್ಕರೆ, 10ಕ್ವಿ. ಗೋಧಿ, 5ಕ್ವಿ. ಬೆಲ್ಲ, ಸೀರೆ, ಅವಶ್ಯ ವಸ್ತುಗಳ ನೆರವು. ** ಈ ಬಾರಿಯ ಸಾಂಪ್ರದಾಯಿಕ ದಸರಾ ಉದ್ಘಾಟಿಸಲಿದ್ದಾರೆ ಸುಧಾಮೂರ್ತಿ ** ಕಾಂಗ್ರೆಸ್‌ಗೆ ಗುಡ್​ ಬೈ ಹೇಳಿ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಬಿಜೆಪಿಗೆ. ** ಬಿಎಸ್​ವೈ ವಿರುದ್ಧದ ಡಿನೋಟಿಫಿಕೇಷನ್​ ಪ್ರಕರಣಗಳು ವಜಾ ** ಇದೇ ಶುಕ್ರವಾರ ಸಮ್ಮಿಶ್ರ ಸರ್ಕಾರ ಸಮನ್ವಯ ಸಮಿತಿ ಸಭೆ ** ಐದು ವರ್ಷ ಎಚ್ಡಿಕೆ ಅವರೇ ಸಿಎಂ: ತೋಟಗಾರಿಕಾ ಸಚಿವ ಮನಗೂಳಿ ** ಪ್ರಧಾನಿ ಮೋದಿ ಹತ್ಯೆಗೆ ಸಂಚು: ವಿಚಾರವಾದಿ ವರವರ ರಾವ್‌ ಬಂಧನ ** ಕೇರಳ ನಿರಾಶ್ರಿತ ಕೇಂದ್ರಗಳಿಗೆ ಭೇಟಿ ನೀಡಿ, ಜನರ ಸಮಸ್ಯೆ ಆಲಿಸಿದ ರಾಹುಲ್ ಗಾಂಧಿ ** ದೇಶದ ಜಾತ್ಯತೀತ ತತ್ವಗಳಿಗೆ ಕೇಂದ್ರ ಸರ್ಕಾರದಿಂದ ಧಕ್ಕೆ: ಡಿಎಂಕೆ ವರಿಷ್ಠ  ಸ್ಟಾಲಿನ್​ ** ಇಸ್ರೋದಿಂದ 2019 ರ ವರ್ಷಾರಂಭದಲ್ಲಿ ಚಂದ್ರಯಾನ-2 ಉಡಾವಣೆ ** ಏಷ್ಯನ್‌ ಕ್ರೀಡಾಕೂಟ: 800ಮೀ‌ ಓಟದಲ್ಲಿ ಭಾರತದ ಮಂಜಿತ್‌ ಸಿಂಗ್‌ಗೆ ಚಿನ್ನ;ಒಟ್ಟು 50ಪದಕ ಗೆದ್ದ ಭಾರತ.

ಜೈ ಶೇಗುಣಸಿ ದಿನದ ಸುದ್ದಿ.. ದಿ: 28-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 28-08-18 ** ಅಥಣಿ ಪಿ ಎಲ್ ಡಿ ಬ್ಯಾಂಕ್ ಚುನಾವಣೆ:15ರಲ್ಲಿ 11ಸ್ಥಾನ ಪಡೆದ ಲಕ್ಷ್ಮಣ ಸವದಿ ಬಣ. ** ಅರ್ಕಾವತಿ ಡಿನೋಟಿಫಿಕೇಶನ್​ ತನಿಖೆ: ಎಚ್​ಡಿಕೆ ಹೆಸರು ಕೈಬಿಡಲು ಕೋರ್ಟ್​ ಆದೇಶ ** ಸಮನ್ವಯ ಸಮಿತಿಯಲ್ಲಿ ನಿರ್ಧಾರವಾದರೆ ಸಿಎಂ ಬದಲಾವಣೆ ಎಂದ ಕೃಷಿ ಸಚಿವ ಶಿವಶಂಕರ್ ರೆಡ್ಡಿ. ** ಬಿಜೆಪಿಯವರಿಗೆ ನೀತಿ, ಧರ್ಮ ಯಾವುದೂ ಗೊತ್ತಿಲ್ಲ: ದಿನೇಶ್​ ಗುಂಡೂರಾವ್​ ** 13 ಜಿಲ್ಲೆಗಳ 48 ತಾಲೂಕು ಬರ ಪೀಡಿತ ಎಂದು ಷೋಷಣೆ ** ನಾನು ಮಾಡಿದಷ್ಟು ಕೆಲಸ ಯಾವ ಮುಖ್ಯಮಂತ್ರಿಯೂ ಮಾಡಿಲ್ಲ: ಸಿದ್ದರಾಮಯ್ಯ ** ಸಮನ್ವಯ ಸಮಿತಿಯಲ್ಲಿ ದಿನೇಶ್ ಗುಂಡೂರಾವ್,​ ನಾನೂ ಇರಬೇಕು: ಎಚ್​.ವಿಶ್ವನಾಥ್ ** ರಾಮನಗರದಲ್ಲಿ ಕಾಂಗ್ರೆಸ್​ ಸ್ಪರ್ಧಿಸದಿದ್ದರೆ ಬಂಡಾಯವೇಳುತ್ತೇನೆ:  ಸಿ.ಎಂ.ಲಿಂಗಪ್ಪ ** ರೈಲುಗಳಲ್ಲಿ ಶಾಪಿಂಗ್​​ಗೆ ವ್ಯವಸ್ಥೆ ಕಲ್ಪಿಸಲು ರೈಲ್ವೇ ಇಲಾಖೆಗಳ ಚಿಂತನೆ ** ಜೈವಿಕ ಇಂಧನ ಚಾಲಿತ ದೇಶದ ಮೊದಲ ವಿಮಾನ ಪ್ರಾಯೋಗಿಕ ಹಾರಾಟ ಯಶಸ್ವಿ ** ಏಷ್ಯನ್​ ಕ್ರೀಡಾಕೂಟ: ಬ್ಯಾಡ್ಮಿಂಟನ್ನಲ್ಲಿ ಫೈನಲ್​ ತಲುಪಿದ ಸಿಂಧು; ಒಟ್ಟು 41ಪದಕ ಗೆದ್ದ ಭಾರತ

ಜೈ ಶೇಗುಣಸಿ ದಿನದ ಸುದ್ದಿ.. ದಿ: 27-08-18

ಜೈ ಶೇಗುಣಸಿ ದಿನದ ಸುದ್ದಿ.. ದಿ: 27-08-18 ** ರಕ್ಷಾ ಬಂಧನ: ರಾಷ್ಟ್ರಪತಿ ಕೋವಿಂದ್, ಪ್ರಧಾನಿ ಮೋದಿಗೆ ರಾಖಿ ಕಟ್ಟಿದ ಮಕ್ಕಳು ** ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದ ಕೊಡುಗೆ ಏನು: ಮಾಜಿ ಸಿಎಂ ಸಿದ್ದರಾಮಯ್ಯ ** ಕಾಂಗ್ರೆಸ್-ಜೆಡಿಎಸ್​ ಅಧಿಕೃತ ರಿಜಿಸ್ಟರ್​ ಮ್ಯಾರೇಜ್: ಸಚಿವ ಜಮೀರ್‌ ಅಹಮ್ಮದ್‌ ಖಾನ್‌ ** ಸಾ.ರಾ.ಮಹೇಶ್‌ ಮೇಲೆ ರಕ್ಷಣಾ ಸಚಿವೆ ಗರಂ: ವಿಷಾದ ವ್ಯಕ್ತಪಡಿಸಿದ ಸಿಎಂ ** ಇನ್ನು ಐದು ವರ್ಷ ಯಾರ ಕಾಲೂ ಎಳೆಯೋಲ್ಲ: ಸಚಿವ ಡಿಕೆಶಿ ** ಅತಿಯಾದ ಗೋಮಾಂಸ ಭಕ್ಷಣೆಯಿಂದಾಗಿ ಕೇರಳದಲ್ಲಿ ಪ್ರವಾಹ: ಬಿಜೆಪಿ ಶಾಸಕ ಬಸನಗೌಡ ** ಪ್ರಚಾರಕ್ಕೆ ಕಾಂಗ್ರೆಸ್​ ಮೀಟರ್​ ಬಡ್ಡಿ ಹಣ ಬಳಸುತ್ತಿದೆ: ಬಿಜೆಪಿ ಮುಖಂಡ ಅನಿಲ್ ಮೆಣಸಿನಕಾಯಿ ** ಡಿಸೆಂಬರ್ 31ರೊಳಗೆ ಚಿಪ್ ಆಧಾರಿತ ಡೆಬಿಟ್ ಕಾರ್ಡುಗಳಿಗೆ ಬದಲಾಯಿಸಿಕೊಳ್ಳಿ; ಎಸ್ ಬಿಐ ** ಅತ್ಯಾಚಾರವನ್ನು ಸಹಿಸಲು ಸಾಧ್ಯವಿಲ್ಲ. ಮಹಿಳೆಯರಿಗೆ ಅನ್ಯಾಯವಾಗಲು ಬಿಡುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ ** ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಸೋದರರ ಫೈಟ್‌, ನಾಮಪತ್ರ ಸಲ್ಲಿಸಿದ ಸ್ಟಾಲಿನ್‌ ** ತೃತೀಯ ಲಿಂಗಿಗಳೊಂದಿಗೆ ಗಂಭೀರ್​ ರಾಖಿ ಸಂಭ್ರಮ ** ಕೇರಳದ ಜನರೊಂದಿಗೆ ಇಡೀ ದೇಶವಿದೆ: ಪ್ರಧಾನಿ ನರೇಂದ್ರ ಮೋದಿ ** ಲೋಕಸಭಾ ಚುನಾವಣೆ: ಕೋಮುವಾದಿಯೇತರ ಪಕ್ಷಗಳ ಮೈತ್ರಿ ಅಗತ್ಯ-ಅಮರ್ತ್ಯಸೇನ್

ಜೈ ಶೇಗುಣಸಿ ದಿನದ ಸುದ್ದಿ... ದಿ: 26-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 26-08-18 ** ನೆರೆ ಸಂತ್ರಸ್ತರಿಗೆ ಇನ್ಫೋಸಿಸ್​ ಪ್ರತಿಷ್ಠಾನದಿಂದ ಮೂರು ಹಂತದಲ್ಲಿ ಸಹಾಯ ಹಸ್ತ: ಸುಧಾಮೂರ್ತಿ ** ಎಚ್​ಡಿಕೆ ಕೊಡಗಿಗೆ ಲೇಟ್​ ಆಗಿ ಬಂದ ಲೇಟ್​ ಕಮ್ಮರ್​: ಶ್ರೀರಾಮುಲು ** ಎಐಸಿಸಿ ಪ್ರಚಾರ ಸಮಿತಿಯಲ್ಲಿ ಸ್ಥಾನ ಗಿಟ್ಟಿಸಿದ ರಮ್ಯಾ ** ಕಾಂಗ್ರೆಸ್​ ಅಧಿಕಾರಕ್ಕೆ ಬರುತ್ತೆ, ಮತ್ತೆ ಸಿಎಂ ಆಗುವೆ ಎಂದು ಪುನರುಚ್ಚರಿಸಿದ ಸಿದ್ದು ** ಎಷ್ಟು ದಿನ ಸಿಎಂ ಆಗಿರ್ತೀನೋ ಗೊತ್ತಿಲ್ಲ: ಎಚ್‌.ಡಿ.ಕುಮಾರಸ್ವಾಮಿ ** ಸರ್ಕಾರ ಪತನದ ಕನಸು ಕಾಣುತ್ತಿರುವ ಅಧಿಕಾರಿಗಳಿಗೆ ಶೀಘ್ರ ಬಿಸಿ ಮುಟ್ಟಿಸುತ್ತೇನೆ: ಸಿಎಂ ಕುಮಾರಸ್ವಾಮಿ ** ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್‌ ಚಿತ್ರದ ಚಿನ್ನದ ರಾಖಿಗೆ ಭಾರಿ ಬೇಡಿಕೆ ** ಪ್ರಧಾನಿ ಮೋದಿ ತುರ್ತು ಸಂದರ್ಭದಲ್ಲಿ ಸಹಾಯ ಮಾಡಿಲ್ಲ: ಖರ್ಗೆ ** ಸಾಲ ಮನ್ನಾ ಆಗಿದ್ದರೆ ರಾಜೀನಾಮೆ ನೀಡುತ್ತಿದ್ದೆ: ಶ್ರೀರಾಮುಲು ** ಚಿಕ್ಕಮಗಳೂರಿನಲ್ಲಿ ಮತ್ತೆ ಕಂಪಿಸಿದ ಭೂಮಿ; ಜನರಲ್ಲಿ ಆತಂಕ. ** ಪ್ರವಾಹದಿಂದ ತತ್ತರಿಸಿದ ಕೊಡಗು: ಸಂತ್ರಸ್ತರಿಗೆ ಚಿನ್ನದ ಪದಕ ಅರ್ಪಿಸಿದ ಬೋಪಣ್ಣ ** ಏಷ್ಯನ್‌ ಗೇಮ್ಸ್‌ 2018: ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟ ಪಿವಿ ಸಿಂಧು, ಸೈನಾ ನೆಹ್ವಾಲ್; 29ಪದಕ ಮುಡಿಗೇರಿಸಿಕೊಂಡ ಭಾರತ.

ಜೈ ಶೇಗುಣಸಿ ದಿನದ ಸುದ್ದಿ... ದಿ: 25-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 25-08-18 ** ರಾಷ್ಟ್ರೀಕೃತ ಬ್ಯಾಂಕ್ ಗಳ 25ಸಾವಿರ ಚಾಲ್ತಿಸಾಲ, 2ಲಕ್ಷದವರೆಗೆ ಸುಸ್ತಿ  ಸಾಲಮನ್ನಾ: ಮುಖ್ಯಮಂತ್ರಿ ಕುಮಾರಸ್ವಾಮಿ ** ಮಲೆನಾಡು, ಕರಾವಳಿ ಭಾಗದಲ್ಲಿ ಮತ್ತೆ ಭಾರಿ ಮಳೆಯಾಗುವ ಮುನ್ಸೂಚನೆ ** ಕೊಡಗಿಗೆ ಬಂದು ಕಾಟಾಚಾರದ ಸಮೀಕ್ಷೆ ನಡೆಸಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್; ಹುಸಿಯಾದ ಸಂತ್ರಸ್ತರ ನಿರಿಕ್ಷೆ. ** ಕೊಡಗಿಗೆ ಸಂಸದರ ನಿಧಿಯಿಂದ 1 ಕೋಟಿ ರು.; ಪ್ರಧಾನಿಗೆ ವರದಿ ಸಲ್ಲಿಸುವೆ: ನಿರ್ಮಲಾ ಸೀತಾರಾಮನ್ ** ರಕ್ಷಣಾ ಸಚಿವರು ಕಾವೇರಿ ಋಣ ತೀರಿಸಲಿ: ಸಾ.ರಾ.ಮಹೇಶ ** ಮಾಜಿ ಪ್ರಧಾನಿ ಮಗನಾದ ರೇವಣ್ಣಗೆ ಒಳ್ಳೆ ಸಂಸ್ಕಾರ ಇರಬೇಕಿತ್ತು: ಶ್ರೀರಾಮುಲು ** ನಾನು ಇನ್ನೊಮ್ಮೆ ಅಧಿಕಾರಕ್ಕೆ ಬರ್ತೀನಿ: ಮಾಜಿ ಸಿಎಂ ಸಿದ್ದರಾಮಯ್ಯ ** ರಾಹುಲ್​ ಗಾಂಧಿಯಂತಾ ಅಪ್ರಬುದ್ಧ ನಾಯಕ ಯಾರೂ ಇಲ್ಲ: ಪ್ರಲ್ಹಾದ ಜೋಶಿ ** ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ- ಯುಎಇ ಸ್ಪಷ್ಟನೆ ** ಪ್ರಧಾನಿ ಮೋದಿ ಹಾಗೂ ಆರ್​ಎಸ್​ಎಸ್​ ವಿರುದ್ಧ ರಾಹುಲ್​ ವಾಗ್ದಾಳಿ ** ಟ್ರಂಪ್ ವಲಸೆ ನೀತಿಯಿಂದ ಹಾನಿ ಖಚಿತ: ಅಮೆರಿಕಾದ 59 ಸಿಇಓಗಳ ಎಚ್ಚರಿಕೆ ** ಏಷ್ಯನ್​ ಕ್ರೀಡಾಕೂಟ: ಭಾರತಕ್ಕೆ ಟೆನಿಸ್​ನಲ್ಲಿ ಚಿನ್ನ; ಒಟ್ಟು 25ಪದಕ ಗೆದ್ದ ಭಾರತ.

ಜೈ ಶೇಗುಣಸಿ ದಿನದ ಸುದ್ದಿ... ದಿ: 24-08-18

ಜೈ ಶೇಗುಣಸಿ ದಿನದ ಸುದ್ದಿ... ದಿ: 24-08-18 ** ಪಶ್ಚಿಮವಾಹಿನಿಯಲ್ಲಿ ವಾಜಪೇಯಿ ಚಿತಾಭಸ್ಮ ವಿಸರ್ಜನೆ ಮಾಡಿದ ಯಡಿಯೂರಪ್ಪ ** ಕೃಷಿ ಸಾಲ ಮನ್ನಾ: ನಾಲ್ಕರ ಬದಲು ಒಂದೇ ಕಂತಿನಲ್ಲಿ ಹಣ ಪಾವತಿಗೆ ಕೆಲ ಬ್ಯಾಂಕ್ ಗಳ ಒತ್ತಾಯ ** ದೇವೇಗೌಡರಿಗೆ 2019ರಲ್ಲಿ ಪ್ರಧಾನಿಯಾಗುವ ಮಹತ್ವಾಕಾಂಕ್ಷೆ ಇಲ್ಲ: ಸಿಎಂ ಕುಮಾರಸ್ವಾಮಿ ** 22.50 ಕೋಟಿ ರೂ. ವೆಚ್ಚದಲ್ಲಿ ಕೊಡಗು ರಸ್ತೆ ಅಭಿವೃದ್ಧಿ: ಸಚಿವ ಕೃಷ್ಣ ಬೈರೇಗೌಡ ** ಮತ್ತಷ್ಟು ಸುಧಾರಿಸಿದ ಕೊಡಗು ಪರಿಸ್ಥಿತಿ; ತಮ್ಮ ಮನೆಗಳತ್ತ ತೆರಳುತ್ತಿರುವ ಸಂತ್ರಸ್ತರು. ** ಕೊಡಗು ಪ್ರವಾಹ ಸ್ಥಳಕ್ಕೆ ಸಿದ್ದರಾಮಯ್ಯ ಮತ್ತು ತಂಡ ಭೇಟಿ. ** ಕೊಡಗು: ಮತ್ತಷ್ಟು ಮೃತದೇಹ ಪತ್ತೆ, ಸತ್ತವರ ಸಂಖ್ಯೆ 15ಕ್ಕೆ ಏರಿಕೆ ** 2022ರೊಳಗೆ ಪ್ರತಿಯೊಂದು ಕುಟುಂಬ ಸ್ವಂತ ಮನೆ ಹೊಂದುವುದು ನನ್ನ ಕನಸು - ಪ್ರಧಾನಿ ಮೋದಿ ** ಕೇರಳ ಪ್ರವಾಹ ಪೀಡಿತರ ಪುನರ್ವಸತಿಗೆ ವಿದೇಶಿ ಸರ್ಕಾರಗಳ ಸಹಾಯ ಬೇಡ; ವಿದೇಶಾಂಗ ಸಚಿವಾಲಯ ಸ್ಪಷ್ಟನೆ ** ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ ಚುನಾವಣೆ ಸಾಧ್ಯವೇ ಇಲ್ಲ: ಒ.ಪಿ. ರಾವತ್​ ** ಹಿರಿಯ ಪತ್ರಕರ್ತ ಕುಲ್​ದೀಪ್​ ನಯ್ಯರ್ ​ ವಿಧಿವಶ; ರಾಷ್ಟ್ರಪತಿ, ಪ್ರಧಾನಿ ಸಂತಾಪ ಸೂಚನೆ ** ಟಿ20 ಪಂದ್ಯಕ್ಕೆ ವಿದಾಯ ಘೋಷಿಸಿದ ಮಹಿಳಾ ಆಟಗಾರ್ತಿ ಜುಲಾನಾ ಗೋಸ್ವಾಮಿ ** ಏಷ್ಯನ್ ಕ್ರೀಡಾಕೂಟ: ಒಟ್ಟು 18ಪದಕ ಮುಡಿಗೇರಿಸಿಕೊಂಡ ಭಾರತ

ಕೊಡಗಿನ ಸಂತ್ರಸ್ತರಿಗಾಗಿ ಮಿಡಿದ ಶೇಗುಣಸಿ ಗ್ರಾಮಸ್ಥರ ಹೃದಯ...!

Image
ಜೈ ಶೇಗುಣಸಿ ಸುದ್ದಿ.. ಶೇಗುಣಸಿ: ಇಲ್ಲಿಯ ಗ್ರಾಮಸ್ಥರು ನೆರೆ ಹಾವಳಿಗೆ ತತ್ತರಿಸಿದ ಕೊಡಗು ಸಂತ್ರಸ್ತರಿಗಾಗಿ ಅಗತ್ಯ ವಸ್ತು ಮತ್ತು ಆಹಾರ ಧಾನ್ಯ ಸಂಗ್ರಹಣೆ ಮಾಡಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ, ಸಂತ್ರಸ್ತರಿಗಾಗಿ ಅಗತ್ಯ ನೆರವು ನೀಡಿ ಎಂದು ಮನವಿ ಮಾಡಲಾಯಿತು. ಆಹಾರ ಧಾನ್ಯ ಸಂಗ್ರಹಣೆಯಲ್ಲಿ ಇಲ್ಲಿಯವರೆಗೆ  45ಕ್ವಿಂಟಲ್ ಅಕ್ಕಿ, 11ಕ್ವಿಂಟಲ್ ಸಕ್ಕರೆ, 5ಕ್ವಿಂಟಲ್ ಗೋಧಿ, 5ಕ್ವಿಂಟಲ್ ತೊಗರಿ ಬೇಳೆ ಸಂಗ್ರಹವಾಗಿದೆ. ಎಲ್ಲಾ ಗ್ರಾಮಸ್ಥರು ನೀಡಿದ ಕೊಡುಗೆಯನ್ನು ಶುಕ್ರವಾರ ಸಂಜೆ ಕೊಡಗು ಜಿಲ್ಲೆಗೆ ಕಳುಹಿಸಿ ಕೊಡಲಾಗುವುದು. ಮತ್ತು ಇನ್ನೂ ಶುಕ್ರವಾರ ಸಾಯಂಕಾಲದ ವರೆಗೆ ಆಹಾರ ಧಾನ್ಯವನ್ನು ಸಂಗ್ರಹಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ