ಕೊಡಗಿನ ಸಂತ್ರಸ್ತರಿಗಾಗಿ ಮಿಡಿದ ಶೇಗುಣಸಿ ಗ್ರಾಮಸ್ಥರ ಹೃದಯ...!
ಜೈ ಶೇಗುಣಸಿ ಸುದ್ದಿ..
ಶೇಗುಣಸಿ: ಇಲ್ಲಿಯ ಗ್ರಾಮಸ್ಥರು ನೆರೆ ಹಾವಳಿಗೆ ತತ್ತರಿಸಿದ ಕೊಡಗು ಸಂತ್ರಸ್ತರಿಗಾಗಿ ಅಗತ್ಯ ವಸ್ತು ಮತ್ತು ಆಹಾರ ಧಾನ್ಯ ಸಂಗ್ರಹಣೆ ಮಾಡಿದರು.ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಜಾಥಾ, ಸಂತ್ರಸ್ತರಿಗಾಗಿ ಅಗತ್ಯ ನೆರವು ನೀಡಿ ಎಂದು ಮನವಿ ಮಾಡಲಾಯಿತು.
ಆಹಾರ ಧಾನ್ಯ ಸಂಗ್ರಹಣೆಯಲ್ಲಿ ಇಲ್ಲಿಯವರೆಗೆ 45ಕ್ವಿಂಟಲ್ ಅಕ್ಕಿ, 11ಕ್ವಿಂಟಲ್ ಸಕ್ಕರೆ, 5ಕ್ವಿಂಟಲ್ ಗೋಧಿ, 5ಕ್ವಿಂಟಲ್ ತೊಗರಿ ಬೇಳೆ ಸಂಗ್ರಹವಾಗಿದೆ.
ಎಲ್ಲಾ ಗ್ರಾಮಸ್ಥರು ನೀಡಿದ ಕೊಡುಗೆಯನ್ನು ಶುಕ್ರವಾರ ಸಂಜೆ ಕೊಡಗು ಜಿಲ್ಲೆಗೆ ಕಳುಹಿಸಿ ಕೊಡಲಾಗುವುದು. ಮತ್ತು ಇನ್ನೂ ಶುಕ್ರವಾರ ಸಾಯಂಕಾಲದ ವರೆಗೆ ಆಹಾರ ಧಾನ್ಯವನ್ನು ಸಂಗ್ರಹಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ



Comments
Post a Comment