ಬತ್ತಿದ ಕೃಷ್ಣೆಯ ಒಡಲು, ಹನಿ ನೀರಿಗೂ ತತ್ವಾರ..
ಬತ್ತಿದ ಕೃಷ್ಣೆಯ ಒಡಲು, ಹನಿ ನೀರಿಗೂ ತತ್ವಾರ..
- ಚೇತನ ಶಿವರಾಯ ಯಲಡಗಿ
ರಾಷ್ಟ್ರೀಯ ಪಕ್ಷಗಳ ಮುಖಂಡರು ಲೋಕಸಭಾ ಚುನಾವಣೆಯ ಮತಕ್ಕೋಸ್ಕರ, ಮಹಾರಾಷ್ಟ್ರ ಸರ್ಕಾರದ ಜೊತೆ ಮಾತುಕತೆ ನಡೆಸಿದ್ದೇವೆ, 2-3 ದಿನದಲ್ಲಿ ನೀರು ಬರುತ್ತದೆ ಎಂದೆಲ್ಲಾ ಹೇಳಿದರು. ಆದರೆ ಚುನಾವಣೆ ಮುಗಿದು 1ವಾರ ಕಳೆದರೂ ನೀರಿನ ವಾಸನೆ ಸಹಿತ ಇಲ್ಲ.
ನದಿ ಸಂಪೂರ್ಣ ಬತ್ತಿ ಹೋಗಿರುವುದರಿಂದ, ಜನ ಕುಡಿಯಲು ಬೇರೆ ಗ್ರಾಮಗಳಿಂದ ನೀರು ತಂದು ಜೀವನ ನಡೆಸುತ್ತಿದ್ದಾರೆ. ಆದರೆ ಜಾನುವಾರುಗಳ ಪರಿಸ್ಥಿತಿ ಹೇಳತೀರದು.
ಅನಿವಾರ್ಯವಾಗಿ ಕುಡಿಯಲು ಯೋಗ್ಯವಲ್ಲದ ನೀರನ್ನು ಜಾನುವಾರುಗಳಿಗೆ ಕುಡಿಯಲು ಕೊಡಲಾಗುತ್ತಿದೆ.
ಅಥಣಿಯ ಶಾಸಕರಾದ ಶ್ರೀ ಮಹೇಶ ಕುಮಟಳ್ಳಿರವರು ಜನರ ಕಷ್ಟಗಳಿಗೆ ಸ್ಪಂದಿಸದೇ, ಬೆಂಗಳೂರು-ಮುಂಬೈ ನಗರಗಳಲ್ಲಿ ರಾಜಕೀಯ ಮೇಲಾಟಗಳಲ್ಲಿ ಮಗ್ನರಾಗಿದ್ದಾರೆ. ಆದಕಾರಣ ಗ್ರಾಮಸ್ಥರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಒಟ್ಟಾರೆ ರಾಜಕೀಯ ನಾಯಕರು, ಜನಪ್ರತಿನಿಧಿಗಳು ಜನರ ಕಷ್ಟಗಳಿಗೆ ಸ್ಪಂದಿಸಿ, ಮಹಾರಾಷ್ಟ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಕೃಷ್ಣಾ ನದಿಗೆ ನೀರು ಬಿಡಿಸುವ ಕೆಲಸ ಮಾಡಿಸಬೇಕೆಂದು ಜನರ ಒತ್ತಾಯ..



Comments
Post a Comment