ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-02-19
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 02-02-19
** ಮೋದಿ ಸರ್ಕಾರದ ಕೊನೆಯ ಬಜೆಟ್ ಮಂಡಿಸಿದ ಪಿಯೂಷ್ ಗೊಯಲ್; ಬಿಜೆಪಿಯಿಂದ ಚಪ್ಪಾಳೆ, ಚುನಾವಣೆ ಗಿಮಿಕ್ ಎಂದ ವಿರೋಧ ಪಕ್ಷ.* ದೇಶದ ಎಲ್ಲ ಸಣ್ಣ ರೈತರಿಗೆ 6000ರೂ. ಪರಿಹಾರ
* ನೈಸರ್ಗಿಕ ವಿಕೋಪಕ್ಕೊಳಗಾದ ರೈತರಿಗೆ 5% ಬಡ್ಡಿ ದರದಲ್ಲಿ ಸಾಲ
* ಅಂಚೆ ಠೇವಣಿ TDS ಮಿತಿ 10000 ದಿಂದ 40000ಕ್ಕೆ ಹೆಚ್ಚಳ
* ವಿದ್ಯಾರ್ಥಿಗಳ ಶೈಕ್ಷಣಿಕ ಸಾಲದ ತೆರಿಗೆ ಪಾವತಯಿಂದ ವಿನಾಯಿತಿ
* ಮನೆ ಬಾಡಿಗೆ ಮೇಲಿನ ಸೆಸ್ ಇಳಿಕೆ, ಗೃಹ ಸಾಲ 2ಲಕ್ಷ ರೂ.ವರೆಗೆ ತೆರಿಗೆ ವಿನಾಯಿತಿ
* ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಗೆ 19ಸಾವಿರ ಕೋಟಿ ಮೀಸಲು
* ಉಜ್ವಲ ಯೋಜನೆಯಡಿ 8ಕೋಟಿಯಷ್ಟು ಉಚಿತ ಗ್ಯಾಸ್ ಗುರಿ
* ಸಣ್ಣ ಕೈಗಾರಿಕೆಯ 1ಕೋಟಿವರೆಗಿನ ಸಾಲಕ್ಕೆ 2% ಮೀಸಲು
* ಪ್ರತ್ಯೇಕ ಮೀನುಗಾರಿಕೆ ಇಲಾಖೆ ಸ್ಥಾಪನೆ
* ತೆರಿಗೆ ವಿನಾಯಿತಿ-2ಲಕ್ಷದಿಂದ 5ಲಕ್ಷಕ್ಕೆ ಏರಿಕೆ
* ಕಾರ್ಮಿಕ ಬೊನಸ್ 7000ರೂ.ಗೆ ಏರಿಕೆ, ಗ್ರಾಚ್ಯುಟಿ ಮೊತ್ತ 10ಲಕ್ಷದಿಂದ 30ಲಕ್ಷಕ್ಕೆ ಏರಿಕೆ
** 12 ಕೋಟಿ ರೈತರು, 3 ಕೋಟಿಗಿಂತ ಹೆಚ್ಚು ವೃತ್ತಿಪರರಿಗೆ ಬಜೆಟ್ ಲಾಭದಾಯಕ: ನರೇಂದ್ರ ಮೋದಿ
** ಅತ್ಯುತ್ತಮ ಬಜೆಟ್ ಮಂಡಿಸಿದ ಪಿಯೂಷ್ ಗೋಯಲ್: ಅರುಣ್ ಜೇಟ್ಲಿ ಟ್ವೀಟ್
** ಗೋವಾ ಸಿಎಂ ಪರಿಕ್ಕರ್ ಏಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವಿಭಾಗಕ್ಕೆ ದಾಖಲು
** ಮೇಲುಕೋಟೆಯ ಪಂಚಕಲ್ಯಾಣಿ ಜೀರ್ಣೋದ್ಧಾರಕ್ಕೆ ಇನ್ಫೋಸಿಸ್ ಫೌಂಡೇಶನ್ ನೆರವು
** ಅಣ್ಣ ಹಜಾರೆ ಉಪವಾಸ ಸತ್ಯಾಗ್ರಹ: ಬಿಪಿ, ಶುಗರ್ ಗಣನೀಯ ಏರಿಕೆ; ವೈದ್ಯರ ಆತಂಕ
Comments
Post a Comment