ಜೈ ಶೇಗುಣಸಿ ಸುದ್ದಿ ಸಂಪದ... ದಿ: 25-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 25-11-18
** ಮಂಡ್ಯ ಜಿಲ್ಲೆ ಪಾಂಡವಪುರದ ವಿಸಿ ನಾಲೆಗೆ ಉರುಳಿಬಿದ್ದ ಖಾಸಗಿ ಬಸ್: 25 ಜನರ ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ** ಮಂಡ್ಯ ಬಸ್ ದುರಂತ: ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸಂತಾಪ
** ಬಿಜೆಪಿಯಿಂದ ಸರ್ಕಾರದ ರಿಪೋರ್ಟ್ ಕಾರ್ಡ್: ಎಚ್ಡಿಡಿ, ಎಚ್ಡಿಕೆ ವಿರುದ್ಧ ಬಿಎಸ್ವೈ ಗುಡುಗು
** ರಾಜ್ಯದಲ್ಲಿ ಶೀಘ್ರವೇ ನರ್ಸಿಂಗ್ ವಿಶ್ವವಿದ್ಯಾನಿಲಯ ಸ್ಥಾಪನೆ: ಡಿ.ಕೆ ಶಿವಕುಮಾರ್
** ಪೊಲೀಸ್ ನೇಮಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಬಯಲು: ಇಂದಿನ ಪರೀಕ್ಷೆ ಮುಂದೂಡಿಕೆ
** OLXನಲ್ಲಿ ವಂಚನೆ, ವ್ಯಕ್ತಿಯೊಬ್ಬರಿಗೆ 1.1 ಲಕ್ಷ ರೂ. ಪಂಗನಾಮ;
** ನ.29 ಬಿಜೆಪಿ ಶಾಸಕಾಂಗ ಸಭೆ, ಅಧಿವೇಶನದೊಳಗೆ ಹೋರಾಟದ ಬಗ್ಗೆ ಚರ್ಚೆ
** ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಕ್ಕೆ ಬಿಜೆಪಿ ಬದ್ಧ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ
** ತಮ್ಮ ತಾಯಿ ಬಗ್ಗೆ ಲೇವಡಿ ಮಾಡಿದ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ
** ಮೊದಲು ಮಂದಿರ, ನಂತರ ಸರ್ಕಾರ: ಅಯೋಧ್ಯೆಯತ್ತ ಠಾಕ್ರೆ, 'ಧರ್ಮಸಭೆ'ಯಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಭಾಗಿ
** ಜಾಮಾ ಮಸೀದಿ ಕೆಡವಿ, ಅಲ್ಲಿ ಹಿಂದು ದೇವರುಗಳ ವಿಗ್ರಹ ಸಿಗದಿದ್ದರೆ ನನ್ನನ್ನು ನೇಣಿಗೇರಿಸಿ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್
** ಸಿಬಿಐ ಮುಖ್ಯಸ್ಥರ ಕಡ್ಡಾಯ ರಜೆ ನಿರ್ಧಾರ ಸಮರ್ಥಿಸಿಕೊಂಡ ಅರುಣ್ ಜೇಟ್ಲಿ
** ಇಮ್ರಾನ್ ಖಾನ್ ನನ್ನ ಗೆಳೆಯ, ಆಹ್ವಾನವನ್ನು ಸ್ವೀಕರಿಸಿ ಪಾಕ್ಗೆ ಭೇಟಿ ನೀಡುತ್ತೇನೆ: ನವಜೋತ್ ಸಿಂಗ್ ಸಿಧು
** ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ ಶಿಪ್: ಮೇರಿ ಕೋಮ್ಗೆ ಆರನೇ ದಿಗ್ವಿಜಯ
Comments
Post a Comment