ಜೈ ಶೇಗುಣಸಿ ಸುದ್ದಿ ಸಂಪದ... ದಿ: 11-11-18
ಜೈ ಶೇಗುಣಸಿ ಸುದ್ದಿ ಸಂಪದ...
ದಿ: 11-11-18
** ಬೆಳಗಾವಿಯಲ್ಲಿ ಪ್ರಾರಂಭಗೊಂಡ "ಪ್ರತಿ ಶನಿವಾರ ಸಾವಯವ ಮತ್ತು ಸಿರಿಧಾನ್ಯ ಸಂತೆ"; ಗ್ರಾಹಕರಿಗೆ ಭಾಗವಹಿಸಲು ಕರೆ** ಸರಳವಾಗಿ ನೆರವೇರಿದ ರಾಜ್ಯ ಸರ್ಕಾರದ ಟಿಪ್ಪು ಜಯಂತಿ; ರಾಜ್ಯಾದ್ಯಂತ ಟಿಪ್ಪು ಜಯಂತಿ ವಿರೋಧಿ ದೊಡ್ಡ ಮಟ್ಟದ ಪ್ರತಿಭಟನೆ; ಹಲವೆಡೆ ಪ್ರತಿಭಟನಾಕಾರರು ವಶಕ್ಕೆ
** ಟಿಪ್ಪು ಜಯಂತಿ: ಸಂವಹನ ಕೊರತೆಯಿಂದ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸಮಾರಂಭಕ್ಕೆ ಗೈರು
** ಆ್ಯಂಬಿಡೆಂಟ್ ಪ್ರಕರಣ ಜನಾರ್ದನ ರೆಡ್ಡಿ ಆಪ್ತ ಅಲಿಖಾನ್ ಬಂಧನ, ರೆಡ್ಡಿಯ ವಿಚಾರಣೆ ಮುಂದುವರಿಕೆ
** ನಾನು ಎಲ್ಲಿಯೂ ಓಡಿ ಹೋಗಿಲ್ಲ. ಬೆಂಗಳೂರು ಮಹಾನಗರದಲ್ಲಿಯೇ ಇದ್ದೇನೆ: ಸಚಿವ ಜನಾರ್ದನ ರೆಡ್ಡಿ
** ಪ್ರಧಾನಿ ಕುರಿತು ಉದ್ಧಟತನದ ಹೇಳಿಕೆ ನೀಡ್ತಿದ್ರೆ ನಾಲಿಗೆ ಸುಡಬೇಕಾಗುತ್ತೆ: ಬಸನಗೌಡ ಪಾಟೀಲ್ ಯತ್ನಾಳ್ ಕಿಡಿ
** ಬಿಜೆಪಿಯವರು ಗೋಮುಖ ವ್ಯಾಘ್ರಗಳು: ಮಾಜಿ ಸಿಎಂ ಸಿದ್ದರಾಮಯ್ಯ
** ಸಿದ್ದರಾಮಯ್ಯ ಮತಾಂಧ ಎನ್ನುವುದರಲ್ಲಿ ಅನುಮಾನವಿಲ್ಲ: ಕೆ.ಎಸ್. ಈಶ್ವರಪ್ಪ
** ಮತ್ತೆ ಇಳಿಕೆಯಾದ ಪೆಟ್ರೋಲ್, ಡೀಸೆಲ್ ಬೆಲೆ; ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ಗೆ 78.69 ರೂ. ಮತ್ತು ಡೀಸೆಲ್ಗೆ 73.13ರೂ.
** ರಾಜಕೀಯದಲ್ಲಿ ಧರ್ಮ ಬೆರೆಸುವವರನ್ನು ತಿರಸ್ಕರಿಸಿ: ಜಿ. ಟಿ. ದೇವೇಗೌಡ
** ರಾಮ ಮಂದಿರ ನಿರ್ಮಾಣಕ್ಕೆ ವಿರೋಧವಿಲ್ಲ, ನಮ್ಮ ಹಕ್ಕೊತ್ತಾಯ ಮಾಡುತ್ತಿದ್ದೇವೆ ಅಷ್ಟೆ: ಜಮೀರ್ ಅಹ್ಮದ್
** ಹ್ಯಾಟ್ರಿಕ್ ಹೀರೋ ಶಿವಣ್ಣಗೆ ಆಸ್ಟ್ರೇಲಿಯಾ ಕನ್ನಡ ಸಂಘದ 'ಮೂಂಬಾ ಸ್ಟಾರ್' ಪ್ರಶಸ್ತಿ
** ಪ್ರಣಾಳಿಕೆ ಬಿಡುಗಡೆ ಮಾಡುವ ಕಾಂಗ್ರೆಸ್, ಎಂದಿಗೂ ಭರವಸೆ ಈಡೇರಿಸಿಲ್ಲ: ಶಿವರಾಜ್ ಸಿಂಗ್ ಚೌಹಾಣ್
** ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ವಿಚಾರದಿಂದ ಹಿಂದಕ್ಕೆ ಹರಿಯುವುದಿಲ್ಲ: ಕೇರಳ ರಾಜ್ಯ ಮುಖ್ಯಮಂತ್ರಿ ಪಿಣರಾಯಿ ವಿಜಯನ್
** ಛತ್ತೀಸ್ಗಢದಲ್ಲಿ ಬಿಜೆಪಿ ಸರ್ಕಾರ ನಕ್ಸಲರನ್ನು ಸಂಪೂರ್ಣವಾಗಿ ಮಟ್ಟ ಹಾಕಿದೆ: ಅಮಿತ್ ಶಾ
** 2023ರ ಶುಕ್ರನೆಡೆಗೆ ಉಪಗ್ರಹ ಕಳುಹಿಸುವ ಯೋಜನೆ: ವಿದೇಶಿ ಪ್ರಯೋಗಗಳಿಗೆ ಇಸ್ರೊ ಆಹ್ವಾನ
** ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ಮುನಾಫ್ ಪಟೇಲ್ ನಿವೃತ್ತಿ
Comments
Post a Comment