ಜೈ ಶೇಗುಣಸಿ ದಿನದ ಸುದ್ದಿ.. ದಿ: 16-08-18
ಜೈ ಶೇಗುಣಸಿ ದಿನದ ಸುದ್ದಿ..
ದಿ: 16-08-18
** ಕೊಡಗು, ಮಂಡ್ಯ, ಹಾಸನ, ಚಿಕ್ಕಮಗಳೂರು ಸೇರಿ ಹಲವೆಡೆ ಧಾರಾಕಾರ ಮಳೆ, ಜನಜೀವನ ಅಸ್ತವ್ಯಸ್ತ. ಅತಿವೃಷ್ಟಿಯಿಂದ ಪ್ರವಾಹ ಭೀತಿ.** ಭಾರಿಮಳೆಯಾಗುತ್ತಿರುವ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸಿ: ಎಚ್ಡಿಕೆ
** ದೆಹಲಿಯ ಕೆಂಪುಕೋಟೆಯಲ್ಲಿ ಪ್ರಧಾನಿ ಭಾಷಣ: ಭಾರತ ಈಗ ಅಭಿವೃದ್ಧಿಯ ನೆಲ; 2020ಕ್ಕೆ ಭಾರತೀಯರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಪಣ.
** ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದು, ಸಾಲಮನ್ನಾಕ್ಕೆ ಬದ್ಧ. ಅಖಂಡ ಕರ್ನಾಟಕದ ಅಭಿವೃದ್ಧಿಯೇ ನಮ್ಮ ಸರ್ಕಾರದ ಗುರಿ: ಸಿಎಂ ಎಚ್ಡಿಕೆ
** ರಾಜ್ಯದ ಒಂದು ಹನಿ ನೀರು ವ್ಯರ್ಥವಾಗಲು ಬಿಡಲ್ಲ: ಡಿಕೆಶಿ
** ಸಾಹಿತಿ ಕಲ್ಬುರ್ಗಿ ಹತ್ಯೆ ಮಾಡಿದ್ದ ಗ್ಯಾಂಗ್ ನಿಂದಲೇ ಗೌರಿ ಲಂಕೇಶ್ ಹತ್ಯೆ; ಸ್ಪೋಟಕ ಮಾಹಿತಿ ಬಹಿರಂಗ.
** ದೇಶದ ಬಡವರಿಗೆ ನೆರವಾಗುವ ಆರೋಗ್ಯ ಯೋಜನೆ 'ಆಯುಷ್ಮಾನ್ ಭಾರತ' ಸೆ.25ರಿಂದ ಜಾರಿ: ಪ್ರಧಾನಿ ಮೋದಿ.
** ಎಎಪಿ ನಾಯಕ ಅಶುತೋಷ್ ಅವರ ರಾಜಿನಾಮೆ ಅಂಗೀಕರಿಸಲು ಅರವಿಂದ್ ಕೇಜ್ರಿವಾಲ್ ನಕಾರ.
** ಮಹಾದಾಯಿ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ: ವಿರೇಶ ಸೋಬರದಯಠ- ಸದ್ಯಕ್ಕೆ ಪ್ರತಿಭಟನೆ ಅಂತ್ಯ.
** ಏಮ್ಸ್ ಗೆ ಮೋದಿ ಭೇಟಿ, ವಾಜಪೇಯಿ ಆರೋಗ್ಯ ಕುರಿತು ವಿಚಾರಣೆ
** ಗಡಿಯಲ್ಲಿ ಭಾರತಕ್ಕೆ ಸಿಹಿ ಹಂಚಿ, ಶುಭ ಕೋರಿದ ಪಾಕಿಸ್ತಾನ, ಬಾಂಗ್ಲಾ ಸೇನಾ ಅಧಿಕಾರಿಗಳು
** ಹಾರ್ದಿಕ್ ಪಾಂಡ್ಯಗಿರುವ ಆಲ್ರೌಂಡರ್ ಪಟ್ಟ ಕಿತ್ತುಹಾಕಿ: ಭಜ್ಜಿ ಗರಂ.
Comments
Post a Comment