ಹೈಕೋರ್ಟ್​ ಸೂಚನೆಯಂತೆ ಮುಷ್ಕರ ಕೈಬಿಟ್ಟ ಮೆಟ್ರೋ ನೌಕರರು..

ಜೈ ಶೇಗುಣಸಿ ಸುದ್ದಿ..

ಮೆಟ್ರೋ ನೌಕರರ ಸಂಘ ಹೈಕೋರ್ಟ್​ ಸೂಚನೆ ಮೇರೆಗೆ ಮುಷ್ಕರ ಕೈಬಿಟ್ಟಿದೆ. ಮುಂದಿನ 10 ದಿನಗಳವರೆಗೆ ಯಾವುದೇ ಪ್ರತಿಭಟನೆ ಮಾಡದಿರುವಂತೆ ಕೋರ್ಟ್​ ನೀಡಿರುವ ಸೂಚನೆಗೆ ಮೆಟ್ರೋ ಯೂನಿಯನ್​ ಸಹಮತ ವ್ಯಕ್ತಪಡಿಸಿದೆ.
ಎಸ್ಮಾ ರದ್ದುಗೊಳಿಸುವಂತೆ ನೌಕರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು 10 ದಿನಗಳ ಗಡುವು ನೀಡಿ ಸರ್ಕಾರ, ಬಿಎಂಆರ್​ಸಿಎಲ್​, ನೌಕರರ ಸಂಘಕ್ಕೆ ತಾಕೀತು ಮಾಡಿದೆ.
ನಿಮ್ಮೆಲ್ಲರ ಭಿನ್ನಾಭಿಪ್ರಾಯಗಳಿಂದ ಜನಸಾಮಾನ್ಯರು ಸಮಸ್ಯೆ ಎದುರಿಸಬಾರದು. ಸದ್ಯಕ್ಕೆ ಮುಷ್ಕರ ಕೈಬಿಟ್ಟು ಸಂಧಾನ ಮಾಡಿಕೊಳ್ಳಿ ಎಂದು ಹೇಳಿರುವ ನ್ಯಾಯಾಲಯ ಮುಂದಿನ ಅರ್ಜಿ ವಿಚಾರಣೆಯನ್ನು ಜೂ.19ಕ್ಕೆ ಮುಂದೂಡಿದೆ.

Comments

Popular posts from this blog

ಗೂಗಲ್ ಪ್ಲೇ-ಸ್ಟೋರ್‌ನಿಂದ ಕಿಂಬೋ ಕಣ್ಮರೆ; ವೆಬ್‌ಸೈಟ್ ಢಮಾರ್!

ಸಿಂಗಾಪುರದಲ್ಲಿ ಭಾರತೀಯ ಹಣ ಪಾವತಿ ಆ್ಯಪ್‌ಗಳ ಬಿಡುಗಡೆ...

ಜೈ ಶೇಗುಣಸಿ ಸುದ್ದಿ ಸಂಪದ... ದಿ: 02-12-18